Advertisement

ನಳೀನ್ ಕುಮಾರ್ ಕಟೀಲ್ ಒಬ್ಬ ಜೋಕರ್ : ಸಿದ್ದರಾಮಯ್ಯ

06:13 PM Apr 12, 2021 | Team Udayavani |

ಕೊಪ್ಪಳ : ನಳೀನ್ ಕುಮಾರ್ ಕಟೀಲ್ ವಿಧೂಶಕ, ಜೋಕರ್ ಇದ್ದ ಹಾಗೆ ಎಂದು ಮಾಜಿ ಸಿಎಂ ವಿಪಕ್ಷ ನಾಯಕ  ಸಿದ್ದರಾಮಯ್ಯ ಕಟೀಲ್‌ ವಿರುದ್ಧ ಕಟುವಾಗಿ ಟೀಕಿಸಿದರು.

Advertisement

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು ಮಂಗಳಾ ಅಂಗಡಿಗೆ ಅವಮಾನ ಮಾಡಿಲ್ಲ  ಸುರೇಶ್ ಅಂಗಡಿನೇ ನಮ್ಮ ಪಾಲಿನ ಹಣ ಕೇಳಿಲ್ಲ, ಇನ್ನು ಈ ಅಮ್ಮ ಏನ್ ಕೇಳ್ತಾರೆ ಎಂದಿದ್ದೆ. ಆದರೆ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ.  ನಾನು ಯಾಕೆ ಕ್ಷಮೆ ಕೇಳಬೇಕು ಎಂದರು.

ನಾನು ಅವಮಾನ ಮಾಡಿದಂತೆ ಮಾತಾಡಿಲ್ಲ. ಅವರು ಏನಾದ್ರೂ ಹೇಳಬಹುದು ಎಂದು ನಳೀನ್ ಕುಮಾರ್ ತಲೆ ಹಿಡುಕ ಹೇಳಿಕೆಗೆ ತಿರುಗೇಟು‌ ನೀಡಿದರು. ತಲೆ ಹಿಡುಕ ಹೇಳಿಕೆಯು ಬಿಜೆಪಿಯವರಿಗೆ ಅನ್ವಯಿಸುತ್ತೆ. ಅದು ನಮಗೆ ಅನ್ವಯ ಆಗಿಲ್ಲ ಎಂದರು.

ಇನ್ನು ಬಿ ವೈ ವಿಜಯೇಂದ್ರ ಹೆಸರೇಳುತ್ತಲೆ ಗರಂ ಆದ ಸಿದ್ದರಾಮಯ್ಯ, ಐ ಡೋಂಟ್  ವಾಂಟ್ ರಿಯಾಕ್ಟ್ ವಿಜಯೇಂದ್ರ, ವಿಜಯೇಂದ್ರ ಏನೂ ಸಚಿವರಾಗಿದ್ರಾ ? ಮುಖ್ಯಮಂತ್ರಿ ಆಗಿದ್ದಾರಾ ? ಯಡಿಯೂರಪ್ಪನ ಮಗ ಬಿಟ್ರೆ ಅವರಿಗೆ ಏನ್ ಕ್ವಾಲಿಫಿಕೇಶನ್ ಇದೆ. ವಿಜಯೇಂದ್ರಗೆ ಏನ್ ಅರ್ಹತೆ ಇದೆ ಎಂದರು.

ನಾನು ಹೇಗೆ ಕಾಂಗ್ರೆಸ್ ಪಾರ್ಟಿ ಸೇರದೆ ಅನ್ನೋದ ಗೊತ್ತಾ ನಿಮಗೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈಶ್ವರಪ್ಪ ಪೆದ್ದ, ಅವನಿಗೆ ಬ್ರೇನ್ ಗೂ ನಾಲಿಗೆಗೂ ಲಿಂಕ್ ಇಲ್ಲ. ಬಾಯಿಗೆ ಬಂದಂತೆ ಮಾತಾಡ್ತಾನೆ ಎಂದರು.‌

Advertisement

ಇನ್ನು ಕೊರೊನಾ ಹೆಚ್ಚಳದ ಹಿನ್ನಲೆಯಲ್ಲಿ ಲಾಕಡೌನ್ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ಲಾಕ್ಡೌನ್ ನಿಂದ ಪರಿಹಾರ ಆಗಲ್ಲ‌, ನಿನ್ನೆ ಒಂದೇ ದಿನ ಒಂದು ಸಾವಿರ ಕೇಸ್ ಬಂದಿದ್ದು, ಬಾರ್ಡರ್ ಗಳಲ್ಲಿ ಟೆಸ್ಟ್ ಮಾಡ್ತಿಲ್ಲ, ಮಹಾರಾಷ್ಟ್ರ, ಕೇರಳದಿಂದ ಜನ ಬರ್ತಿದ್ದಾರೆ. ಅವರನ್ನ ಟೆಸ್ಟ್ ಮಾಡಲ್ಲ ಬದಲಾಗಿ ಸರ್ಕಾರ ದುಡ್ಡು ಹೊಡೆಯೋದ್ರಲ್ಲಿ ಕಾಲಹರಣ ಮಾಡ್ತಿದೆ ಎಂದು ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next