Advertisement

ಸಂಘ ಪರಿವಾರ ವಿದ್ಯಾರ್ಥಿಗಳ ನಡುವೆ ಧರ್ಮದ ವಿಷಬೀಜ ಬಿತ್ತುತ್ತಿದೆ: ಸಿದ್ಧರಾಮಯ್ಯ

04:03 PM Feb 08, 2022 | Team Udayavani |

ಪಣಜಿ: ಮುಸ್ಲಿಂ ಹೆಣ್ಣು ಮಕ್ಕಳು ಬಹಳ ವರ್ಷಗಳಿಂದ ಮುಖ ಮುಚ್ಚಿಕೊಳ್ಳಲು ಸ್ಕಾರ್ಪನ್ನು ಧರಿಸುತ್ತಿದ್ದಾರೆ. ಆದರೆ ಕೇಸರಿ ಶಾಲನ್ನು ಮೊದಲಿನಿಂದ ಹಾಕಿಕೊಳ್ಳುತ್ತಿದ್ದರಾ…? ಎಂದು ಕರ್ನಾಟಕದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಸ್ಯೆಯನ್ನು ಹುಟ್ಟು ಹಾಕಿದವರು ಯಾರು..? ಸಂಘ ಪರಿವಾರದವರು ಹುಟ್ಟುಹಾಕಿದ್ದು. ಸಂಘಪರಿವಾರದವರು ಧರ್ಮದ ವಿಷಬೀಜ ಬಿತ್ತಿ ಅಶಾಂತಿಯನ್ನು ಉಂಟುಮಾಡುತ್ತಿದ್ದಾರೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ ಅನಿಸುತ್ತೆ ಎಂದು ಸಿದ್ಧರಾಮಯ್ಯ ಆರೋಪಿಸಿದರು.

ಸರ್ಕಾರ ಇರುವುದು ಎಲ್ಲರಿಗೂ ರಕ್ಷಣೆ ಕೊಡಿಸಲು. ಇಂತಹ ಕೆಲಸ ಮಾಡುವುದು ಸರಿಯಲ್ಲ. ತಮಗೆ ಬೇಕಾದ ಬಟ್ಟೆ ಧರಿಸಲು ಅವರಿಗೆ ಹಕ್ಕಿದೆ.  ಈ ವಿಷಯದಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಹೇಳುವ ಮೂಲಕ ಕರ್ನಾಟಕದ ಪ್ರತಿಪಕ್ಷದ ನಾಯಕ ಹಿಜಾಬ್ ಧರಿಸುವುದನ್ನು ಬೆಂಬಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next