Advertisement

ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು: ಸಿದ್ದರಾಮಯ್ಯ ವಾಗ್ದಾಳಿ

07:29 PM Jul 27, 2021 | Team Udayavani |

ಸಂಕೇಶ್ವರ : ಬಿಜೆಪಿಯವರಿಗೆ ಜನಹಿತ ಮುಖ್ಯವಲ್ಲ. ಅಭಿವೃದ್ದಿಪರ ಕಾಳಜಿ ಇಲ್ಲ. ಪ್ರವಾಹ ನಿರಾಶ್ರಿತರಿಗೆ ಕಣ್ಣಿರು ಒರೆಸುವ ಕಾಳಜಿ ಕೂಡಾ ಅವರಿಗಿಲ್ಲ. ರಾಜಕೀಯ ಮುಖ್ಯವಾಗಿರುವ ಅವರಿಗೆ ಕೇವಲ ಕೋಮವಾದ ಮಾಡುವದು, ಸುಳ್ಳು ಹೇಳುವದನ್ನು ಬಿಟ್ಟರೆ ಅವರಿಗೆ ಬೇರೆ ಎನೂ ಗೊತ್ತಿಲ್ಲ ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು

Advertisement

ಹಿರಣ್ಯಕೇಶಿ ನದಿಯಲ್ಲಿ ಉಂಟಾಗಿದ್ದ ಪ್ರವಾಹಪೀಡಿತ ಹುಕ್ಕೇರಿ ತಾಲೂಕಿನ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 25 ತಾರೀಖು ಆದ ಬಳಿಕ ಒಂದು ಗಂಟೆ ಕೂಡಾ ಅಧಿಕಾರದಲ್ಲಿ ಇರಬಾರದು ಅಂತ ಯಡಿಯೂರಪ್ಪ ಅವರಿಗೆ ಸೂಚನೆ ನೀಡಲಾಗಿತ್ತು. ಅದಕ್ಕೆ ಯಡಿಯೂರಪ್ಪ ಅವರಿಗೆ 26ರಂದು ತಾವು ಸಿಎಂ ಸ್ಥಾನದಿಂದ ಕೆಳಗೆ ಇಳಿಯುವ ಬಗ್ಗೆ ಮೊದಲೆ ಗೊತ್ತಿತ್ತು. ಆದರೆ ಈ ಭಾಗದ ನಿರಾಶ್ರಿತರ ಮುಂದೆ ಸುಳ್ಳು ಹೇಳಲು ಯುಡಿಯೂರಪ್ಪ ಇಲ್ಲಿಗೆ ಬಂದಿದ್ದರು. ಯಾಕೆ ಇಲ್ಲಿ ಬಂದು ನಿರಾಶ್ರಿತರಿಗೆ ಸುಳ್ಳು ಹೇಳುಬೇಕಾಗಿತ್ತು ಎಂದು ಕುಟುಕಿದರು.

ಬಿಜೆಪಿಯವರು ಸುಳ್ಳು ಹೇಳುವದರಲ್ಲಿ ಬಹಳ ನಿಸ್ಸೀಮರು. ರಾಜ್ಯದ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಪರಿಹಾರ ನೀಡುವಲ್ಲಿ ಕೇಂದ್ರ ಮಲತಾಯಿ ಧೋರಣೆ ತೋರುತ್ತಿದೆ. ಈ ಕುರಿತು ಸದನದಲ್ಲಿ ಪ್ರಸ್ತಾಪ ಮಾಡುವದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಹೇಗಾದರು ಮಾಡಿ ಅಧಿಕಾರಕ್ಕೆ ಬರುವ ದಾರಿ ನೋಡುತ್ತಾರೆ ಅವರು, 2018ರಲ್ಲಿ ಜನಾ ಅವರಿಗೆ ಜನಬೆಂಬಲ ನೀಡಿದ್ದರಾ.? 17 ಜನಾ ಶಾಸಕರನ್ನು ಖರೀದಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. 2009ರಲ್ಲಿ ಹಾಗೂ 2019ರಲ್ಲಿ ಆಗಲೂ ಬಿಎಸ್.ಯಡಿಯೂರಪ್ಪ ಅವರೆ ಮುಖ್ಯಮಂತ್ರಿ ಆಗಿದ್ದರು. ಆದರೆ ಆ ಸಂದರ್ಭದಲ್ಲಿ ಪ್ರವಾಹ ಪೀಡಿತರನ್ನು ಸರಿಯಾದ ರೀತಿಯಲ್ಲಿ ಸ್ಥಳಾಂತರ ಕಾರ್ಯ ಮಾಡಲಿಲ್ಲ. ಮನೆಗಳಿಗೆ ಪರಿಹಾರ ಕೊಡಲಿಲ್ಲ. ಕೇಂದ್ರ ಸರಕಾರದಿಂದು ಪರಿಹಾರ ತರುವ ಪ್ರಯತ್ನ ಮಾಡಲಿಲ್ಲ. ನಿರಾಶ್ರಿತರಿಗೆ ಪರಿಹಾರ ಕೊಡಿಸಲಿಲ್ಲ ಎಂದು ಬಿಜೆಪಿ ಸರಕಾರದ ಮೇಲೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು; ಮತ್ತೊರ್ವನಿಗೆ ಗಾಯ: ಗ್ರಾಮಸ್ಥರ ಆಕ್ರೋಶ

Advertisement

ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಅದರಲ್ಲಿ ಈ ಭಾಗದಲ್ಲಿ ನೂರು ವರ್ಷಗಳಲ್ಲಿ ಹಿಂದೆಂದೂ ಕಂಡರಿಯದ ರೀತಿ ಪ್ರವಾಹ ಉಂಟಾಗಿದೆ. ಆದರೆ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರಿಗೆ ರಾಜ್ಯಕ್ಕೆ ಭೆಟಿ ನೀಡಿಲ್ಲ. ಬೇರೆ ರಾಜ್ಯಗಳಿಗೆ ಭೇಟಿ ನೀಡಿದರು. ರಾಜ್ಯದ ಬಗ್ಗೆ ಮಲತಾಯಿ ಕೇಂದ್ರದಿಂದ ಪರಿಹಾರ ಕೊಡಿಸುವಲ್ಲಿ ರಾಜ್ಯ ನಾಯಕರಿಗೆ ಸಾಧ್ಗವಾಗಿಲ್ಲ. ರಾಜ್ಯತ ಬಿಜೆಪಿ ಸರಕಾರ ಕೇಂದ್ರದ ಮೇಲೆ ಒತ್ತಡ ಹಾಕಿ ಪ್ರವಾಹಕ್ಕೆ ದುಡ್ಡು ತರಲೇ ಇಲ್ಲ ಇವೆಲ್ಲದರ ಕುರಿತು ಸದನಲ್ಲಿ ಪ್ರಸ್ತಾಪ ಮಾಡುತ್ತೇನೆ. ನಾವು ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಅವಲೋಕಿಸಲು ನಾಲ್ಕು ತಂಡಗಳನ್ನು ರಚನೆ ಮಾಡಿದ್ದೇವೆ. ಆ ತಂಡವು ಎಲ್ಲ ಕಡೆಗಳಲ್ಲಿ ಸಂಚರಿಸಿ ವರದಿ ನೀಡುತ್ತಾರೆ. ಆ ವರದಿ ಆದರಿಸಿ ಸರಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ನುಡಿದರು.

ಕಳೆದ ಎರಡು ವಾರ ಸುರಿದ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ ಸುಮಾರು ಎಕರೆ 300 ಬೆಳೆ ಬೆಳೆ ನಾಶವಾಗಿದೆ. ಅದರಂತೆ ಪ್ರವಾಹ ಪೀಡಿದ ಸ್ಥಳಗಳಿಂದ ನಾಗರಿಕರಿಗೆ ಬೇರೆಡೆಗೆ ಸ್ಥಳಾಂತರ ಮಾಡುವ ಮೂಲಕ ಪರ್ಯಾಯ ಸೌಕರ್ಯ ಮಾಡಿಕೊಡುವಂತೆ ಮತ್ತು ಶೀಘ್ರವಾಗಿ ಪ್ರವಾಹಕ್ಕೆ ಮುಳುಗಡೆಯಾಗುವ ಸೇತುವೆಗಳನ್ನು ಎತ್ತರಿಸುವಂತೆ ಸರಕಾರಕ್ಕೆ ಪತ್ರ ಬರೆಯುವ ಮೂಲಕ ಒತ್ತಡ ಹಾಕುವದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿವರಿಸಿದರು. ಈ ಮೊದಲು ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡ ಹಾಗೂ ಕೆಲವು ಗ್ರಾಮಗಳಿಗೆ ಬೇಟ್ಟಿ ನೀಡಿದ ಸಿದ್ದರಾಮಯ್ಯನವರು ಪ್ರವಾಹ ಪೀಡಿತರ ಅಹ್ವಾಲು ಆಲಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕಿ ಅಂಜಲಿ ನಿಂಬಾಳಕರ್, ಲಕ್ಷ್ಮೀ ಹೆಬ್ಬಾಳಕರ್, ಮಾಜಿ ಶಾಸಕರಾದ ಅಶೋಕ ಪಟ್ಟಣ, ಎ.ಬಿ.ಪಾಟೀಲ, ವಿನಯ ನಾವಲಗಟ್ಟಿ, ಲಕ್ಷ್ಮಣರಾವ ಚಿಂಗಳೆ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಆಗಮಿಸುತ್ತಿದ್ದ ರಸ್ತೆಯಲ್ಲಿ ಲಾರಿ ಪಲ್ಟಿ :

ಹುಕ್ಕೇರಿ ತಾಲೂಕಿನಲ್ಲಿ ಹಿರಣ್ಯಕೇಶಿ ನದಿಯಿಂದ ಉಂಟಾಗಿದ್ದ ಪ್ರವಾಹ ಅವಲೋಕಿಸಲು ಆಗಮಿಸುತ್ತಿದ್ದ ಸಿದ್ದರಾಮಯ್ಯ ವಾಹನ ಆಗಮಿಸುವ 2 ನಿಮಿಷ ಮೊದಲು ಚಿಕ್ಕಾಲಗುಡ್ಡ ಗ್ರಾಮದ ಬಳಿ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಘಾತ ಸಂಭವಿಸಿದೆ. ಸಿದ್ದರಾಮಯ್ಯ ಆಗಮಿಸುತ್ತಿದ್ದ ರಸ್ತೆಯಲ್ಲೆ ಲಾರಿಯೊಂದು ಪಲ್ಟಿಯಾಗಿ ಬಿದ್ದ ಹಿನ್ನೆಲೆಯಲ್ಲಿ ಅಔಘಡ ಸಂಭವಿಸಿತ್ತು. ಸಿದ್ದರಾಮಯ್ಯ ಆಗಮನ ಸಂದರ್ಭದಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next