Advertisement

ಬಿಜೆಪಿ-ಜೆಡಿಎಸ್ ಅಪಪ್ರಚಾರದಿಂದ ಕಾಂಗ್ರೆಸ್ ಗೆ ಹಿನ್ನಡೆ:  ಸಿದ್ದರಾಮಯ್ಯ

09:18 AM Nov 06, 2019 | keerthan |

ಶಿವಮೊಗ್ಗ: ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತಕ್ಕೆ ಮುಂದಾದರೂ ನಮಗೆ 38.14% ರಷ್ಟು ಮತ ಬಂದಿದೆ. ಬಿಜೆಪಿ-ಜೆಡಿಎಸ್ ನವರ ಅಪಪ್ರಚಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಕಂಡಿತು. ನಮಗೆ ಸ್ಥಾನಗಳು ಕಡಿಮೆ ಬಂದಿರಬಹುದು ಆದರೆ ಶೇಕಡಾವಾರು ಮತದಲ್ಲಿ ಬಿಜೆಪಿಗಿಂತ ಹೆಚ್ಚಿದೆ, ಯಾವ ಕಾರ್ಯಕರ್ತರು ಧೃತಿಗೆಡಬಾರದು ಎಂದು ಸಿದ್ದರಾಮಯ್ಯ ಹೇಳಿದರು.

Advertisement

ಚೈತನ್ಯ ಸಮಾವೇಶದಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದೆಂದು ನಾವು 80 ಸ್ಥಾನ ಗೆದ್ದರೂ 37 ಸ್ಥಾನ ಪಡೆದ ಜೆಡಿಎಸ್ ಪಕ್ಷದ ಜೊತೆ ಸರ್ಕಾರ ರಚನೆ ಮಾಡಿದ್ದೆವು. ಚುನಾವಣೆಯಲ್ಲಿ ಅಪಪ್ರಚಾರ ಹಾಗೂ ಕೋಮಭಾವನೆಗೆ ಕಿವಿಗೊಟ್ಟು ಬಿಜೆಪಿಗೆ ಮತ ನೀಡಿದ್ದರು.  ಜನರಿಗೆ ಈಗ ತಪ್ಪು ಅರಿವಾಗಿದೆ. ಮನನ ಮಾಡಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಯಡಿಯೂರಪ್ಪ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು. ಅವರು 2008 ರಲ್ಲಿ ಹಾಗೂ 2019ರಲ್ಲಿ ಜನಾದೇಶದಿಂದ ಮುಖ್ಯಮಂತ್ರಿಯಾಗಿಲ್ಲ. ಯಡಿಯೂರಪ್ಪ ನವರು ಜನಾರ್ಶಿವಾರ್ಧದಿಂದ ಅಧಿಕಾರಕ್ಕೆ ಬಂದಿದ್ದೇನೆ ಎನ್ನುತ್ತಾರೆ, ಅಪರೇಷನ್ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next