Advertisement

ಸಿದ್ದರಾಮಯ್ಯ ಕೈ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ: ಪ್ರಹ್ಲಾದ್ ಜೋಶಿ

01:15 PM Dec 01, 2019 | Team Udayavani |

ಹುಬ್ಬಳ್ಳಿ: ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಿನಿ ಅಂತಾರೆ. ಯಾವ ಆಧಾರ ಮೇಲೆ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತೇನೆ ಎಂದು ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಹೆಚ್ ಡಿಕೆ ಅವರೇ ಸಿದ್ದರಾಮಯ್ಯನವರೇ ಮೈತ್ರಿ ಸರ್ಕಾರ ಬೀಳಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಕೈ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ.ಡಿ.9 ಕ್ಕೆ ಬಿಜೆಪಿ ಸರ್ಕಾರ ಬಿಳುತ್ತದೆ ಅಂತ ಹೇಳುತ್ತಾರೆ.ನೋಡೋಣ ಡಿ.9 ಬರಲಿ ಎಲ್ಲವು ಗೊತ್ತಾಗುತ್ತೆ ಎಂದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಬಗ್ಗೆ ಅಲ್ಲಿನ ಮುಖಂಡರು ತೀರ್ಮಾನ ತೆಗದುಕೊಂಡಿದ್ದರು. ನನ್ನ ಪ್ರಕಾರ ಅದು ತಪ್ಪು. ಸಧ್ಯ ಶಿವಸೇನೆ ಆಪರೇಷನ್ ಗೆ ಒಳಗಾಗಿದೆ.ಆಪರೇಷನ್‌ ಮಾಡಿದ್ದು ಎನ್ ಸಿಪಿ,ಕಾಂಗ್ರೆಸ್. ಶರದ್ ಪವಾರ್ ಗೆ ಇದು ಹೊಸದಲ್ಲ. “ಜೈಸಾ ಮಾಮಾ ವೈಸಾ ಬತಿಜಾ” ಎನ್ನುವ ಸ್ಲೋಗನ್  ಶುರುವಾಗಿದೆ. ಗೋವಾ ಸರ್ಕಾರ ಸುಭದ್ರವಾಗಿದೆ. ಎಂದರು.

ಇದೇ ವೇಳೆ ಮಾತಾನಾಡಿದ  ಸಚಿವ ಜಗದೀಶ ಶೆಟ್ಟರ್ ಉಪ ಚುನಾವಣೆಯಲ್ಲಿ 15 ಕ್ಕೆ 15 ಸ್ಥಾನ ನಾವು ಗೆಲ್ಲುತ್ತೇವೆ. ನಾವು ಗೆದ್ದರೆ ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ…? ಎಂದು ಸಿದ್ದರಾಮಯ್ಯಗೆ ಬಹಿರಂಗ ಸವಾಲು ಹಾಕಿದರು.

ಕೈ ನಾಯಕರು ಭ್ರಮನಿರಸರಾಗಿದ್ದಾರೆ.ಹತಾಶೆಗೊಂಡಿದ್ದರಿಂದ ಸರ್ಕಾರ ಬಿಳುತ್ತದೆ ಅಂತ ಜನರ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯದ ಜನತೆಗೆ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಉಪಚುನಾವಣೆ ಮುಗಿದ ಬಳಿಕ ಅವರಿಗೆ ಗೊತ್ತಾಗುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next