Advertisement

ಸಿದ್ದಾಪುರ : ಪೊಲೀಸ್‌ಗೆ ಪಾಸಿಟಿವ್‌ ಶಂಕೆ ಹಿನ್ನೆಲೆಯಲ್ಲಿ ಮರು ಪರೀಕ್ಷೆ

10:37 AM Jun 03, 2020 | sudhir |

ಸಿದ್ದಾಪುರ: ಶಂಕರನಾರಾಯಣ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ ಅವರ ಕೋವಿಡ್ ಸೋಂಕು ಪರೀಕ್ಷೆಯ ಪ್ರಥಮ ವರದಿ ಪಾಸಿಟಿವ್‌ ಬಂದಿದ್ದು, ಶಂಕೆ ಹಿನ್ನೆಲೆಯಲ್ಲಿ ಮರಳಿ ಪರೀಕ್ಷೆಗೆ ಕಳುಹಿಸಲಾಗಿದೆ.

Advertisement

ಠಾಣೆಯ ಎಲ್ಲ ಸಿಬಂದಿಯ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳೆದ 10 ದಿನಗಳ ಹಿಂದೆ ಕಳುಹಿಸಲಾಗಿದ್ದು, ಅನೇಕ ಸಿಬಂದಿಯ ವರದಿ ಬರಬೇಕಾಗಿದೆ. ಮೇ 31ರಂದು ಮಹಿಳಾ ಸಿಬಂದಿಯ ವರದಿ ಬಂದಿದ್ದು, ಕೋವಿಡ್ ಪಾಸಿಟಿವ್‌ ಆಗಿದೆ. ವರದಿ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಸೋಮವಾರ ಮರು ಪರೀಕ್ಷೆಗೆ ಕಳುಹಿಸಲಾಗಿದೆ.

ಮಹಿಳಾ ಸಿಬಂದಿಯ ಸಂಪರ್ಕದಲ್ಲಿದ್ದ 18 ಪೊಲೀಸ್‌ ಸಿಬಂದಿಯನ್ನು ಶಂಕರನಾರಾಯಣ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದ್ದು, ಅಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು, ಸಿಬಂದಿ ಪರದಾಡುವಂತಾಗಿದೆ ಎಂಬ ಆರೋಪವಿದೆ.

ಕೆಎಸ್‌ಆರ್‌ಪಿ ಸಿಬಂದಿಗೆ ಆತಂಕ
ನಕ್ಸಲ್‌ ಪೀಡಿತ ಪ್ರದೇಶದ ಶಂಕರನಾರಾಯಣ ಪೊಲೀಸ್‌ ಠಾಣೆಗೆ ಭದ್ರತೆಗಾಗಿ ಬಂದಿದ್ದ ಕೊಪ್ಪಳದ ಮುನಿರಾಬಾದ್‌ನ ಇಂಡಿಯನ್‌ ರಿಸರ್ವ್‌ ಬೆಟಾಲಿಯನ್‌ನ 8 ಮಂದಿ ಸಿಬಂದಿ ಠಾಣೆಯ ಮೇಲ್ಭಾಗದ ಕೊಠಡಿಯಲ್ಲಿ ವಾಸ್ತವ್ಯವಿದ್ದು, ಅವರಿಗೂ ಆತಂಕ ಶುರುವಾಗಿದೆ. ಇವರನ್ನು ಜೂ. 2ರಂದು ಠಾಣೆಯಿಂದ ಬಿಡುಗಡೆಗೊಳಿಸಲಾಗಿದ್ದು, ಮುನಿ ರಾಬಾದ್‌ನಲ್ಲಿರುವ ಇಂಡಿಯನ್‌ ರಿಸರ್ವ್‌ ಬೆಟಾಲಿಯನ್‌ನಲ್ಲಿ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ ಎನ್ನುವ ಮಾಹಿತಿ ದೊರಕಿದೆ.

Advertisement

Udayavani is now on Telegram. Click here to join our channel and stay updated with the latest news.

Next