Advertisement

ಸಿದ್ದಾಪುರ : ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ

12:32 PM May 19, 2021 | Team Udayavani |

ಸಿದ್ದಾಪುರ : ಸಿದ್ದಾಪುರ ಪೇಟೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ.

Advertisement

ಕೋವಿಡ್ ಕಟ್ಟುನಿಟ್ಟಿನ ನಿಯ ಜಾರಿಯಲ್ಲಿದ್ದರೂ ಪೇಟೆಯಲ್ಲಿ ಎಲ್ಲಾ ಅಂಗಡಿ ಮುಂಗಟುಗಳು ತೆರೆದಿದ್ದು, ಸಾರ್ವಜನಿಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡದೆ ಗುಂಪು ಸೇರಿದ್ದರು.

ತಕ್ಷಣ ಕಾರ್ಯಪ್ರವರ್ತರದ ಅಧಿಕಾರಿಗಳು. ಅಂಗಡಿಗಳಿಗೆ ದಂಡ ಹಾಗೂ ಪೊಲೀಸರು ವಾಹನ ಸೀಜ್ ಮಾಡುವ ಮೂಲಕ ದಂಡ ವಿಧಿಸಿದರು.

ಇದನ್ನೂ ಓದಿ : ಕೋವಿಡ್ 19 ಸೋಂಕು; ಕೇಜ್ರಿವಾಲ್ ಹೇಳಿಕೆಗೆ ಸಿಂಗಾಪುರ್ ಆಕ್ಷೇಪ, ಏನಿದು ಆರೋಪ?

ಕೋವಿಡ್ ನೋಡಲ್ ಆಫೀಸರ್ ರಾಘವೇಂದ್ರ ವರ್ಣಿಕರ್, ಸಿದ್ದಾಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿ ಶ್ರೀಧರ ನಾಯಕ್ ಹಾಗೂ ಸಿಬ್ಬಂದಿ ವರ್ಗ, ಪಂಚಾಯತ್ ಅಧ್ಯಕ್ಷ ಶೇಖರ್ ಕುಲಾಲ್ ಹಾಗೂ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಕೋಡ್ ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ದಂಡ ಹಾಕುವ ಮೂಲಕ ಎಚ್ಚರಿಸಿದರು.

Advertisement

ಶಂಕರನಾರಾಯಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಕೋವಿಡ್ ನಿಯಮ ಉಲ್ಲಂಘಿಸಿದ ಬೈಕ್ ಗಳನ್ನು ಸೀಜ್ ಮಾಡಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡರು.

ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಅಂಗಡಿಗಳಿಂದ ಸುಮಾರು ರೂ.5500 ದಂಡ ವಸೂಲಿ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next