Advertisement

Siddapura: ಬೈಕ್‌ ಡಿಕ್ಕಿ; ಗಂಭೀರ: ದೂರು ದಾಖಲು

08:28 PM Sep 05, 2024 | Team Udayavani |

ಸಿದ್ದಾಪುರ: ಬೈಕಿನಲ್ಲಿ ಸಿದ್ದಾಪುರದಿಂದ ಯಡಮೊಗೆಗೆ ಸೆ.5ರಂದು ಹೋಗುವಾಗ ಕಮಲಶಿಲೆ ಕ್ರಾಸ್‌ ಬಳಿ ಎದುರು ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಬೈಕ್‌ ಸವಾರ ಗೌರೀಶ್‌ ನೇರವಾಗಿ ತನ್ನ ಬೈಕಿಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಸುಕುಮಾರ(34) ಯಡಮೊಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಬೈಕ್‌ ಡಿಕ್ಕಿಯ ಪರಿಣಾಮ ಸುಕುಮಾರ ಅವರು ಗಂಭೀರವಾಗಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next