Advertisement

Siddapura: ಲಾರಿ ಅಡ್ಡಗಟ್ಟಿ ಹಲ್ಲೆ: ಪ್ರಕರಣ ದಾಖಲು

10:56 PM Oct 04, 2023 | Team Udayavani |

ಸಿದ್ದಾಪುರ: ಲಾರಿಯಲ್ಲಿ ಮಂಗಳೂರಿನಿಂದ ಕೋಕ್‌ ತುಂಬಿಸಿಕೊಂಡು ಹೊಸಪೇಟೆ ಕಡೆಗೆ ಹೋಗುತ್ತಿದ್ದ ಹುಬ್ಬಳಿಯ ಶಿವಪ್ಪ ಅವರನ್ನು ತಡೆದು ಹಲ್ಲೆಗೈದಿರುವುದಾಗಿ ಆರೋಪಿಸಲಾಗಿದೆ.

Advertisement

ಸಿದ್ದಾಪುರ ಗ್ರಾಮದ ಹೊನ್ನಮ್ಮ ದೇವಸ್ಥಾನದ ಬಳಿ ಲಾರಿ ಸಂಚರಿಸುತ್ತಿದ್ದಾಗ ಕೆಂಪು ಕಾರಿನಲ್ಲಿ ಬಂದ ಐವರು ಆರೋಪಿಗಳು ಲಾರಿಯನ್ನು ಅಡ್ಡಕಟ್ಟಿ ಕಲ್ಲು ಮತ್ತು ಕಬ್ಬಿಣ್ಣ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ, ಲಾರಿಯ ಮುಂಭಾಗದ ಗ್ಲಾಸ್‌ಗೂ ಹಾನಿ ಮಾಡಿದ್ದಾರೆ.

ಮೊಬೈಲ್‌ ಕರೆಮಾಡಿದ್ದರೆ ಸುಳ್ಳು ಹೇಳುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆಗೆ ಒಳಗಾದ ಶಿವಪ್ಪ 108 ವಾಹನದ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next