Advertisement

Siddapura: ಪುತ್ರನ ಮನೆ ಸಾಲದಿಂದ ತಂದೆ ಆತ್ಮಹ*ತ್ಯೆ

08:40 PM Oct 18, 2024 | Team Udayavani |

ಸಿದ್ದಾಪುರ: ಪುತ್ರ ಮನೆ ನಿರ್ಮಾಣಕ್ಕೆ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಮನೆ ಕೂಡ ಪೂರ್ಣಗೊಳ್ಳದಿರುವುದರಿಂದ ತಂದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ವೆಯಲ್ಲಿ ನಡೆದಿದೆ.

Advertisement

ಬೆಳ್ವೆ ಗ್ರಾಮದ ಮಹಾಬಲ (75) ಆತ್ಮಹತ್ಯೆ ಮಾಡಿಕೊಂಡವರು. ಬೆಳ್ವೆ ಗ್ರಾಮದ ಭಾಸ್ಕರ ಅವರು 4 ವರ್ಷದ ಹಿಂದೆ ಮನೆ ಕಟ್ಟಲು ಪ್ರಾರಂಭಿಸಿದ್ದರು. ಮಗನ ಮನೆ ಕಟ್ಟಲು ತಾಯಿ ಕೂಡ ಸಾಲ ಮಾಡಿಕೊಟ್ಟಿದರು. ಅಪೂರ್ಣವಾಗಿದ್ದ ಮನೆಯನ್ನು ಅ. 13ರಂದು ಗೃಹ ಪ್ರವೇಶ ಮಾಡಿದ್ದರು.

ಮಗನ ಸಾಲದ ಚಿಂತೆಯಲ್ಲೇ ಕೊರಗಿದ್ದ ಮಹಾಬಲ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next