Advertisement

Siddapur: ತಂದೆಯಿಂದ ಹಲ್ಲೆಗೆ ಯತ್ನ; ದೂರು

01:04 AM Nov 17, 2023 | Team Udayavani |

ಸಿದ್ದಾಪುರ: ಮಡಾಮಕ್ಕಿ ಗ್ರಾಮದ ಬೆಪ್ಡೆಯಲ್ಲಿ ಮಗನ ಮೇಲೆ ತಂದೆ ಕತ್ತಿಯಿಂದ ಬೀಸಿ, ಕೊಲೆಗೆ ಯತ್ನಿಸಿದ ಘಟನೆಯ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸಂತ (40) ಹಾಗೂ ತಂದೆ ರಾಮ ಅವರು ಬೆಪ್ಡೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು.

Advertisement

ಮನೆ ಬಿಟ್ಟು ಓಡಿಸುವ ದೃಷ್ಠಿಯಿಂದ ರಾಮ ಅವರು ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದರು. ನ. 15ರಂದು ರಾಮ ಅವರು ಕೊಲ್ಲುವ ಉದ್ದೇಶದಿಂದ ಮನೆ ಬಳಿ ಕತ್ತಿ ಹಿಡಿದುಕೊಂಡು ಬಂದು ಕುತ್ತಿಗೆಗೆ ಬೀಸಿದ್ದು, ಇದರಿಂದ ತಪ್ಪಿಸಿಕೊಂಡಿರುವುದ್ದಾಗಿ ವಸಂತ ಅವರು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next