Advertisement

Siddapura ಅಂಪಾರು: ಹಾವು ಕಚ್ಚಿ ಮಹಿಳೆ ಸಾವು

12:00 AM Dec 25, 2023 | Team Udayavani |

ಸಿದ್ದಾಪುರ: ಅಂಪಾರು ಗ್ರಾಮದ ಈರ್ಜಿ ಬಲಾಡಿ ಮನೆ ಹೇಮಲತಾ (58) ಅವರಿಗೆ ಡಿ. 20ರಂದು ಮನೆಯ ಕೊಟ್ಟಿಗೆಯ ತೆಂಗಿನಕಾಯಿ ಹಾಕುವ ಕೋಣೆಯ ಒಳಗೆ ಹೋದಾಗ ಹಾವು ಕಾಲಿಗೆ ಕಚ್ಚಿತ್ತು.

Advertisement

ತತ್‌ಕ್ಷಣ ಅವರನ್ನು ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಅವರು ನಿಧನ ಹೊಂದಿದರು. ಪುತ್ರ ಅಂಕುಶ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next