Advertisement

ಮರಳಿನಲ್ಲಿ ಅರಳಿದ ಸಿದ್ಧಗಂಗಾ ಶ್ರೀ

07:27 AM Feb 18, 2019 | |

ತಿ.ನರಸಿಪುರ: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಹಾಗೂ ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರಿಗೆ ಕುಂಭಮೇಳದಲ್ಲಿ ಮರಳು ಕಲಾಕೃತಿಯ ಮೂಲಕ ಕಲಾವಿದರು ಅಂತಿಮ ನಮನ ಸಲ್ಲಿಸಿದ್ದಾರೆ.

Advertisement

ತಿರುಮಕುಡಲು ಶ್ರೀ ಅಗಸ್ತೇಶ್ವರ ಸ್ವಾಮಿ ದೇವಸ್ಥಾನ ಸಮೀಪದ ಎದುರಿನಲ್ಲಿ  ಪ್ರತ್ಯೇಕವಾದ ಚಪ್ಪರ ನಿರ್ಮಿಸಿ ಅದರೊಳಗೆ ಸುಮಾರು 1.50 ಟನ್‌ ಮರಳು ಬಳಸಿ ಕಲಾವಿದ ಎನ್‌.ರಘುನಂದನ್‌ ಮತ್ತು ತಂಡದವರು ಈ ಕಲಾಕೃತಿಗಳನ್ನು ರಚಿಸಿದ್ದಾರೆ. 

ಸಿದ್ಧಗಂಗಾ ಮಠಾಧೀಶರಾಗಿದ್ದ  ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯರ ನಗುಮುಖವನ್ನು ಮರಳಿನಲ್ಲಿ ಕೆತ್ತಲಾಗಿದೆ. ಅದೇ ಮರಳಿನ ಗುಡ್ಡೆಯ ಹಿಂಭಾಗದಲ್ಲಿ ಸೈನ್ಯದ ಟೋಪಿ ಧರಿಸಿ, ಬಂದೂಕು ಹಿಡಿದರುವ ಇಬ್ಬರು ಸೈನಿಕರ ಮರಳು ಶಿಲ್ಪ ಸಿದ್ಧಪಡಿಸಲಾಗಿದೆ.

ಸುಮಾರು 12 ಗಂಟೆ ನಿರಂತರ ಶ್ರಮವಹಿಸಿರುವ ಕಲಾವಿದರು, ಸಿದ್ಧಗಂಗಾ ಸ್ವಾಮೀಜಿ ಮತ್ತು ಇತ್ತೀಚೆಗೆ ಹುತಾತ್ಮರಾದ ಸೈನಿಕರಿಗೆ ಕಲಾಕೃತಿಯ ಮೂಲಕ ನಮನ ಸಲ್ಲಿಸಿದ್ದಾರೆ. ಸೈನಿಕರ ತಲೆಯ ಮೇಲ್ಭಾಗದಲ್ಲಿ ಗೋಳಾಕಾರದ ಭೂಮಿ ಮತ್ತು ಅದರ ಮಧ್ಯದಲ್ಲಿ ಭಾರತದ ಭೂಪಟ ಮೂಡಿ ಬಂದಿದೆ.

ಅತ್ಯಂತ ನಾಜೂಕು ಹಾಗು ಅಚ್ಚುಕಟ್ಟಾಗಿ ಮರಳಿನಲ್ಲಿ ಕಲಾಕೃತಿಯನ್ನು ಬಿಡಿಸಲಾಗಿದೆ. ಇದು ಈಗ ಕುಂಭ ಮೇಳಾದ ಆಕರ್ಷಣೆಗಳಲ್ಲಿ ಒಂದಾಗಿದ್ದು ಭಕ್ತರು ಇದರ ಎದರು ನಿಂತು ಸೆಲ್ಫಿ ತೆಗೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಕುರಿತು ಮಾತನಾಡಿದ ಮರಳು ಶಿಲ್ಪಿ ಎನ್‌.ರಘುನಂದನ್‌, ಶಿಕ್ಷಣ, ಊಟ ಮತ್ತು ವಸತಿ ಕಲ್ಪಿಸಿ ಲಕ್ಷಾಂತರ ವಿದ್ಯಾರ್ಥಿಗ ಬಾಳ ಜ್ಯೋತಿಯಾಗಿ ಬೆಳಗುತ್ತಿರುವ- 

Advertisement

ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮೀಜಿಯ ಸ್ಮರಣೆಯನ್ನು ಮಣ್ಣಿನ ಕಲಾಕೃತಿ ಮೂಲಕ ಮಾಡಿದ್ದೇನೆ. ಹಾಗೆಯೇ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಸೈನಿಕರಿಗೆ ಸಲಾಂ ಸಲ್ಲಿಸಲು ಹಾಗೂ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಹೀನ ಕೃತ್ಯ ಖಂಡಿಸಿ, ಹುತಾತ್ಮರಾದ  ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪ್ರಯತ್ನ ಕಲೆಯ ಮೂಲಕ ಮಾಡಿದ್ದೇನೆ ಎಂದು ವಿವರಿಸಿದರು.

1.50 ಟನ್‌ ಮರಳು: ಯುವಬ್ರಿಗೇಡ್‌ ಸಂಘಟನೆಯವರು ಮರಳು ಮತ್ತು ಸ್ಥಳದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸುಮಾರು 1.50 ಟನ್‌ ಮರಳು ಬಳಸಲಾಗಿದೆ. ನಿರಂತರ 12 ಗಂಟೆಗಳ ಶ್ರಮದಿಂದ ಇದು ಸಾಧ್ಯವಾಗಿದೆ. ಫೆ.19ರ ತನಕವೂ ಇರಲಿದೆ.

ಮರಳು ಒಣಗಿದರೆ ಕಲಾಕೃತಿಗೆ ಹಾನಿಯಾಗುವ ಸಾಧ್ಯತೆ ಇರುವುರಿಂದ ಸದಾ ಎಚ್ಚರ ವಹಿಸುತ್ತಿರಬೇಕು. ಮರಳಿನಲ್ಲಿ ನೀರಿನ ಅಂಶ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.  ಹೀಗಾಗಿ ಮೂರು ದಿನವೂ ಕಲಾಕೃತಿಯ ಬಳಿ ಇರಲಿದ್ದೇನೆ ಎಂದು ಹೇಳಿದರು.

ಸಿದ್ಧಗಂಗಾ ಸ್ವಾಮೀಜಿ ಹಾಗೂ ಹುತಾತ್ಮರಾದ ಸೈನಿಕರಿಗೆ ಈ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ. ಸಿದ್ಧಗಂಗಾ ಶ್ರೀಗಳ ಕುತ್ತಿಗೆಯಿಂದ ಕೆಳ ಭಾಗಕ್ಕೆ ಕೇಸರಿ ಬಣ್ಣ ಹಚ್ಚಿದ್ದೆವೆ. ಸ್ವಾಮೀಜಿ ಸದಾ ಖಾವಿ ಧಿರುತ್ತಿದ್ದರಿಂದ ಈ ಬಣ್ಣ ಹಾಕಿದ್ದೇವೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next