Advertisement

State Investigation Agency 3 ದಶಕದ ಹಿಂದಿನ ಪ್ರಕರಣದ ತನಿಖೆಗೆ ಮತ್ತೆ ಸಜ್ಜಾದ ಎಸ್‌ಐಎ

01:09 AM Aug 09, 2023 | Team Udayavani |

ಶ್ರೀನಗರ: ನಿವೃತ್ತ ಜಡ್ಜ್ ನೀಲಕಂಠ ಗಂಜೂ ಭಯೋತ್ಪಾದಕರ ಗುಂಡಿಗೆ ಬಲಿಯಾಗಿ 33 ವರ್ಷ ಗಳು ಕಳೆದ ಬಳಿಕ ಇದೀಗ ಈ ಪ್ರಕರಣಕ್ಕೆ ಮತ್ತೆ ಜಮ್ಮು-ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಜೀವ ನೀಡಿದ್ದು, ಗಂಜೂ ಹತ್ಯೆಯ ಹಿಂದಿನ ಪಿತೂರಿ ಬಹಿರಂಗ ಪಡಿಸಲು ಮುಂದಾಗಿದೆ.

Advertisement

ಈ ಹತ್ಯೆ ಪ್ರಕರಣ ಸಂಬಧಿಸಿದಂತೆ ಅಥವಾ ಅದಕ್ಕೆ ಪೂರಕವಾಗಿರುವಂಥ ಯಾವುದೇ ಘಟನೆಗಳನ್ನು ನೋಡಿರುವ ಹಾಗೂ ಕೇಳಿರುವ, ಆ ಸಂದರ್ಭಗಳನ್ನು ಅರಿತಿರುವ ಜನರು ತಮ್ಮ ಮುಂದೆ ಬಂದು ಮಾಹಿತಿ ಹಂಚಿಕೊಳ್ಳುವಂತೆ ಎಸ್‌ಐಎ ಕೇಳಿದೆ. ಅಲ್ಲದೇ ಮಾಹಿತಿ ನೀಡುವ ವ್ಯಕ್ತಿಗಳ ಗುರುತನ್ನು ಸಂಪೂರ್ಣವಾಗಿ ಗೌಪ್ಯವಾಗಿಡುವುದಾಗಿಯೂ ಭರವಸೆ ನೀಡಿದೆ.

ಪ್ರತ್ಯೇಕವಾದಿ ಸಂಘಟನೆ ಜೆಕೆಎಲ್‌ಎಫ್ನ ಸಂಸ್ಥಾಪಕ ಮೊಹಮ್ಮದ್‌ ಮಕುºಲ್‌ ಭಟ್‌ನಿಗೆ ಮರಣದಂಡನೆ ವಿಧಿಸಿದ ಬಳಿಕ, 1989ರಲ್ಲಿ ಉಗ್ರರು ಗಂಜೂ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next