Advertisement

“ರಹದಾರಿ’ಗೆ ಬಂದ ಶ್ವೇತಾ ಶ್ರೀವಾತ್ಸವ್‌

12:50 PM Oct 11, 2019 | Lakshmi GovindaRaju |

“ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ’ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪರಿಚಯವಾಗಿದ್ದ ನಟಿ ಶ್ವೇತಾ ಶ್ರೀವಾತ್ಸವ್‌ ಅವರಿಗೆ ನಂತರ ಸಾಕಷ್ಟು ಹೆಸರು ತಂದುಕೊಟ್ಟಿದ್ದು “ಕಿರಗೂರಿನ ಗಯ್ನಾಳಿಗಳು’ ಚಿತ್ರ. ಆ ಚಿತ್ರದ ನಂತರ, ಸುಮಾರು ಮೂರು ವರ್ಷ ಬಣ್ಣದ ಲೋಕದಿಂದ ಕೆಲಕಾಲ ದೂರ ಉಳಿದಿದ್ದ ಶ್ವೇತಾ ಈಗ ಮತ್ತೆ ಬಿಗ್‌ ಸ್ಕ್ರೀನ್‌ನಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಶುರು ಮಾಡಲು ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದಾರೆ.

Advertisement

ಹೌದು, ಶ್ವೇತಾ ಶ್ರೀವಾತ್ಸವ್‌ “ರಹದಾರಿ’ ಎನ್ನುವ ಹೊಸ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ರಹದಾರಿ’ ಚಿತ್ರದಲ್ಲಿ ಶ್ವೇತಾ ಅವರು ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಶ್ವೇತಾ ಅವರ ಕಂ ಬ್ಯಾಕ್‌ ಚಿತ್ರ “ರಹದಾರಿ’ಯನ್ನು ಗಿರೀಶ್‌ ವೈರಮುಡಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಒಂದ್‌ ಕಥೆ ಹೇಳ್ಲಾ’ ಚಿತ್ರವನ್ನು ನಿರ್ದೇಶಿಸಿದ್ದ ಗಿರೀಶ್‌ ವೈರಮುಡಿ ಹೇಳಿರುವ “ರಹದಾರಿ’ ಚಿತ್ರದ ಕಥೆ ಮತ್ತು ಪಾತ್ರವನ್ನು ಕೇಳಿ ಖುಷಿಯಾಗಿರುವ ಶ್ವೇತಾ ಈ ಚಿತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರಂತೆ.

ಎಲ್ಲೂ ಹೆಚ್ಚು ಬೆಳಕಿಗೆ ಬಂದಿಲ್ಲದ, ಸಾಕಷ್ಟು ಕುತೂಹಲಕಾರಿಯಾಗಿರುವ, ನೈಜ ಘಟನೆ ಆಧಾರವಾಗಿ ಇಟ್ಟುಕೊಂಡಿಒರುವ ಕಥೆ ರಾಬರಿ ಚಿತ್ರದಲ್ಲಿದ್ದು, ಅನೇಕ ತಿರುವುಗಳ ನಡುವೆ ಚಿತ್ರದ ಕಥೆ ಸಾಗುತ್ತದೆ. ಅದನ್ನು ಭೇದಿಸುವ ಪಾತ್ರದಲ್ಲಿ ಶ್ವೇತಾ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಚಿತ್ರತಂಡದ ಮೂಲಗಳ ಮಾಹಿತಿ. ಮುಕ್ತಾಂಬ ಬಸವರಾಜು ಹಾಗೂ ಮಂಜುನಾಥ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ರೋಣದ ಬಕ್ಕೇಶ್‌ ಹಾಗೂ ಕೆ.ಸಿ ರಾವ್‌ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಚಿತ್ರದ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿಗಳು ಶೀಘ್ರದಲ್ಲಿಯೇ ಹೊರಬರಲಿದೆ.  ಒಟ್ಟಾರೆ ರಾಬರಿ ಕೇಸ್‌ ಪತ್ತೆ ಮಾಡಲು “ರಹದಾರಿ’ ಮೂಲಕ ಮತ್ತೆ ಚಿತ್ರರಂಗಕ್ಕೆ ಬರುತ್ತಿರುವ ಶ್ವೇತಾ ಶ್ರೀವಾತ್ಸವ್‌ ಅವರನ್ನು ಪ್ರೇಕ್ಷಕ ಪ್ರಭುಗಳು ಹೇಗೆ ಸ್ವೀಕರಿಸುತ್ತಾರೆ ಅನ್ನೋ ಕುತೂಹಲಕ್ಕೆ ಚಿತ್ರ ತೆರೆಗೆ ಬಂದ ಮೇಲಷ್ಟೇ ಉತ್ತರ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next