Advertisement

ಶುಭಾ ಪೂಂಜಾ- ರಜಿನಿ ನಟನೆಯ ‘ಅಂಬುಜ’ ಟ್ರೇಲರ್ ಗೆ ಮೆಚ್ಚುಗೆ

02:37 PM Oct 14, 2022 | Team Udayavani |

ಶುಭಾ ಪೂಂಜಾ, ರಜಿನಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಹಾರರ್‌ ಕಂ ಕ್ರೈಂ-ಥ್ರಿಲ್ಲರ್‌ ಕಥಾಹಂದರದ “ಅಂಬುಜ’ ಸಿನಿಮಾದ ಮೊದಲ ಟೀಸರ್‌ ಹಾಗೂ ಲಿರಿಕಲ್‌ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. “ಎಸ್‌ ಕೆ ಸಿನಿಮಾಸ್‌’ ಬ್ಯಾನರ್‌ನಲ್ಲಿ ಕಾಶಿನಾಥ್‌ ಡಿ. ಮಡಿವಾಳರ್‌ ಕಥೆ, ಸಾಹಿತ್ಯ ಬರೆದು ನಿರ್ಮಾಣ ಮಾಡಿರುವ ಈ ಸಿನಿಮಾಕ್ಕೆ ಶ್ರೀನಿ ಹನುಮಂತರಾಜು ನಿರ್ದೇಶನ ಮಾಡಿದ್ದಾರೆ.

Advertisement

ಇನ್ನು ಬಹುದಿನಗಳ ನಂತರ “ಅಂಬುಜ’ ಸಿನಿಮಾದ ಮೂಲಕ ಮತ್ತೆ ಬಿಗ್‌ಸ್ಕ್ರಿನ್‌ಗೆ ಎಂಟ್ರಿ ಕೊಡುತ್ತಿರುವುದಕ್ಕೆ ಶುಭಾ ಪೂಂಜಾ ಕೂಡ ತುಂಬ ಖುಷಿಯಾಗಿದ್ದಾರೆ. “ತುಂಬ ನೈಜವಾಗಿರುವ ಕಥೆ. ಈ ಸಿನಿಮಾದಲ್ಲಿ ಕ್ರೈಂ ರಿಪೋರ್ಟರ್‌ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದೇನೆ. ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಸಿನಿಮಾ ಪ್ರೇಕ್ಷಕರಿಗೆ ಖಂಡಿತವಾಗಿಯೂ ಇಷ್ಟವಾಗಲಿದೆ’ ಎಂಬ ವಿಶ್ವಾಸದ ಮಾತು ಶುಭಾ ಪೂಂಜಾ ಅವರದ್ದು.

“ಅಂಬುಜ’ ಸಿನಿಮಾದ ಟೀಸರ್‌ ಮತ್ತು ವಿಡಿಯೋ ಸಾಂಗ್‌ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ಶ್ರೀನಿ ಹನುಮಂತರಾಜು, “ಇದೊಂದು ಹಾರರ್‌ ಕಂ ಕ್ರೈಂ-ಥ್ರಿಲ್ಲರ್‌ ಕಥಾಹಂದರದ ಸಿನಿಮಾ. ಸಮಾಜ ಎಷ್ಟು ಬೆಳೆಯುತ್ತಾ ಹೋಗುತ್ತದೆಯೋ, ಕ್ರೈಂಗಳು ಕೂಡ ಹಾಗೆಯೇ ಬೆಳೆಯುತ್ತಾ ಹೋಗುತ್ತದೆ. ಇದೇ ಎಳೆಯನ್ನು ಇಟ್ಟುಕೊಂಡು ಒಂದು ನೈಜ ಘಟನೆ ಆಧಾರಿಸಿ ಈ ಸಿನಿಮಾ ಮಾಡಿದ್ದೇವೆ. ಕೋವಿಡ್‌ನಿಂದಾಗಿ ಸಿನಿಮಾದ ತೆರೆಗೆ ಬರಲು ಸ್ವಲ್ಪ ತಡವಾಯಿತು. ಈಗಾಗಲೇ ಶೇಕಡ 90ರಷ್ಟು ಸಿನಿಮಾದ ಕೆಲಸಗಳು ಮುಗಿದಿದ್ದು, 2 ಹಾಡಿನ ಚಿತ್ರೀಕರಣವಷ್ಟೇ ಬಾಕಿಯಿದೆ. ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದೇವೆ’ ಎಂದರು.

ನಿರ್ಮಾಪಕ ಕಾಶಿನಾಥ್‌ ಮಡಿವಾಳರ ಮಾತನಾಡಿ, “ನಾನು ನನ್ನ ಕಲ್ಪನೆಯ ಕೆಲವು ವಿಷಯಗಳನ್ನು ಬರೆಯುತ್ತ ಹೋದಾಗ ಈ ಕಥೆ ಸೃಷ್ಟಿಯಾಯಿತು. ಅನೇಕ ಜನರಿಗೆ ಗೊತ್ತಿಲ್ಲದಿರುವ ವಿಷಯವನ್ನು ಈ ಸಿನಿಮಾದಮೂಲಕ ತಿಳಿಸಿದ್ದೇವೆ. ಕಥೆ ಮತ್ತು ಸಿನಿಮಾದ ಮೇಲಿನ ಶ್ರದ್ಧೆ ಸಿನಿಮಾವನ್ನು ಸುಂದರವಾಗಿ ಬರುವಂತೆ ಮಾಡಿದೆ’ ಎಂದರು.

“ಈ ಸಿನಿಮಾ ಮತ್ತು ನನ್ನ ಪಾತ್ರ ಎರಡೂ ತುಂಬಾ ವಿಶೇಷವಾಗಿದೆ. ಲಂಬಾಣಿ ಹುಡುಗಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಮೊದಲ ಬಾರಿಗೆ ಇಂಥದ್ದೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಸಂತಸ ಹಂಚಿಕೊಂಡರು ನಟಿ ರಜಿನಿ.

Advertisement

ಇನ್ನು ಶುಭಾ ಪೂಂಜಾ, ರಜಿನಿ ಅವರೊಂದಿಗೆ ಬೇಬಿ ಆಕಾಂಕ್ಷಾ, ದೀಪಕ್‌ ಸುಬ್ರಹ್ಮಣ್ಯ, ಪದ್ಮಜಾ ರಾವ್‌, ಗೋವಿಂದೇಗೌಡ, ಶರಣಯ್ಯ, ಪ್ರಿಯಾಂಕಾ ಕಾಮತ್‌, ಸಂದೇಶ್‌ ಶೆಟ್ಟಿ ಅಜ್ರಿ ಮೊದಲಾದವರು “ಅಂಬುಜ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಬೆಂಗಳೂರು, ಗದಗ, ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಮುರಳೀಧರನ್‌ ಎಂ. ಛಾಯಾಗ್ರಹಣ, ವಿಜಯ್‌ ಎಂ. ಕುಮಾರ್‌ ಸಂಕಲನ, ಪ್ರಸನ್ನ ಕುಮಾರ್‌ ಎಂ. ಎಸ್‌ ಸಂಗೀತ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next