Advertisement

ಒಂದೂವರೆ ವರ್ಷದ ನಂತರ ಹೇಳಿದ್ದೇನೆ, ಎಷ್ಟೋ ಕೇಸ್ ಗಳು ಮುಚ್ಚಿ ಹೋಗಿವೆ

05:04 PM Oct 21, 2018 | Team Udayavani |

ಬೆಂಗಳೂರು:ದಕ್ಷಿಣ ಭಾರತದ ಪ್ರಸಿದ್ದ ನಟ ಅರ್ಜುನ್ ಸರ್ಜಾ ವಿರುದ್ದ ಮೀ ಟೂ ಅಭಿಯಾನದಡಿಯಲ್ಲಿ ಕಿರುಕುಳ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮತ್ತೆ ಆರೋಪಗಳ ಮಳೆಗೈದಿದ್ದಾರೆ. 

Advertisement

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶ್ರುತಿ , ಅರ್ಜುನ್ ಸರ್ಜಾ ನನ್ನನ್ನು ಡಿನ್ನರ್ ಗೆ ಬಾ, ರೆಸಾರ್ಟ್ ಗೆ ಬಾ ಎಂದು ಕರೆದಿದ್ದರು. ಆಗ ನಾನು ನೋ ಎಂದಿದ್ದೆ. ಘಟನೆ ನಡೆದಾಗ ನನಗೆ ಹೇಗೆ ಪ್ರತಿಕ್ರಿಯೆ ಮಾಡಬೇಕು ಎಂದು ತೋಚಲಿಲ್ಲ. ನಾನು ಒಂದುವರೆ ವರ್ಷದ ನಂತರ ಹೇಳಿದ್ದೇನೆ, ಎಷ್ಟೋ ಕೇಸ್ ಗಳು ಮುಚ್ಚಿ ಹೋಗಿವೆ ಎಂದರು. 

ಚಿತ್ರರಂಗದಲ್ಲಿ ನಾನು ಸಾಕಷ್ಟು ಹಿಂಸೆ ಅನುಭವಿಸಿದ್ದೇನೆ. ಕಾಸ್ಟಿಂಗ್ ಕೌಚ್ ನಲ್ಲಿ ಹಲವರ ಹೆಸರು ಹೇಳಿದ್ದೆ. ಈಗ ನಡೆಯುತ್ತಿರುವ ಮೀ ಟೂ ಅಭಿಯಾನದಿಂದ ನನಗೆ ಧೈರ್ಯ ಬಂದಿದೆ. ಅರ್ಜುನ್ ಸರ್ಜಾ ವಿರುದ್ದ ಕಾನೂನು ರೀತಿಯ ಹೋರಾಟ ಮಾಡುತ್ತೇನೆ ಎಂದು ಗುಡುಗಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ದರ್ಶನ್, ಸುದೀಪ್ ನನ್ನೊಂದಿಗೆ ಗೌರವದಿಂದ ನಡೆದುಕೊಂಡಿದ್ದಾರೆ. ನನಗೆ ಯಾವುದೇ ಪಬ್ಲಿಸಿಟಿ ಅಗತ್ಯವಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next