Advertisement

ಹೃದಯಾಘಾತದಿಂದ ಮಾಜಿ ಕುಸ್ತಿಪಟು ಸಾವು

04:24 PM Sep 05, 2021 | Team Udayavani |

ಶ್ರೀರಂಗಪಟ್ಟಣ: ದಸರಾ ಕುಸ್ತಿ ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ದೇಶಿ ಕುಸ್ತಿಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದ  ಸ್ಟೂಡೆಂಟ್ ಫೈಲ್ವಾನ್ ಎಂದೇ ಪ್ರಸಿದ್ದಿ ಪಡೆದಿದ್ದ ಶ್ರೀರಂಗಪಟ್ಟಣದ ಗಂಜಾಮ್ ನ  ಫೈಲ್ವಾನ್  ಜಯರಾಂ(68) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

Advertisement

ದೇಶಿ ಕುಸ್ತಿ ಪಟುವಾಗಿ ಪ್ರಸಿದ್ದಿ ಪಡೆದು,1000 ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳಲ್ಲಿ ಕುಸ್ತಿ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಇವರು ಶ್ರೀರಂಗಪಟ್ಟಣ ಪುರಸಭೆಗೂ ಕೂಡ ಸದಸ್ಯರಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದರು. ಇಂದು ಬೆಳಿಗ್ಗೆ ಮನೆಯಲ್ಲಿದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇದನ್ನೂ ಓದಿ:ಎಳನೀರು ವ್ಯಾಪಾರಿ ಮೇಲೆ ಹಲ್ಲೆ : ನಗ-ನಾಣ್ಯ ದರೋಡೆ

ಮಾಜಿ ಕುಸ್ತಿಪಟು ನಿಧನಕ್ಕೆ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ, ಮಾಜಿ ಶಾಸಕ ರಮೇಶ್ ಬಾಬು ಸೇರಿದಂತೆ, ಜಯರಾಂ ಅವರ ಶಿಷ್ಯರು ಹಾಗೂ ಕುಸ್ತಿ ಅಭಿಮಾನಿಗಳು ಶ್ರದ್ದಾಂಜಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next