Advertisement

ಶ್ರೀಕಂಠೇಶ್ವರ ಪಂಚಮಹಾರಥೋತ್ಸವ :ಜೆಸಿಬಿ ಬಳಕೆಯಿಂದ ರಥದ ಗಾಲಿ ಮುಕ್ಕು

02:09 AM Mar 21, 2019 | |

ನಂಜನಗೂಡು: ಮಂಗಳವಾರ ನಡೆದ ಶ್ರೀಕಂಠೇಶ್ವರ ಪಂಚ ಮಹಾರಥೋತ್ಸವ ವೇಳೆ ರಥ ಕದಲಿಸಲು ಜಿಸಿಬಿ ಯಂತ್ರ ಬಳಕೆ ಮಾಡಿದ್ದರಿಂದಾಗಿ 110 ಟನ್‌ ತೂಕದ ಗೌತಮ ರಥದ ನಾಲ್ಕೂ ಚಕ್ರಗಳು ಮುಕ್ಕಾಗಿದೆ. ಸೋಮವಾರ ಶ್ರೀಕಂಠೇಶ್ವರನನ್ನು ರಥರೂಡನನ್ನಾಗಿಸಿದ ನಂತರ ಭಕ್ತರು ರಥ ಎಳೆಯಲು ಪ್ರಯತ್ನಿಸಿದರು.

Advertisement

ಪುರಾತನ ರಥ ಚಲಿಸದೇ ಇದ್ದಾಗ ಜೆಸಿಬಿ ಯಂತ್ರಗಳನ್ನು ಬಳಸಿದ್ದರ ಪರಿಣಾಮ, ರಥದ ನಾಲ್ಕೂ ಚಕ್ರಗಳು ಮುಕ್ಕಾಗಿವೆ. ಅಷ್ಟಾದರೂ, ರಥದ ಚಲನೆ ಸಾಧ್ಯವಾಗಲೇ ಇಲ್ಲ. ಒಂದೊಂದಾಗಿ ನಾಲ್ಕಾರು ಹಗ್ಗಗಳು ತುಂಡಾದ ನಂತರ ಭಕ್ತರೇ ಪ್ರಯತ್ನ ಪಟ್ಟು ರಥವನ್ನು ಕದಲಿಸಿ ಸರಾಗವಾಗಿ ಎಳೆದು ರಥೋತ್ಸವಕ್ಕೆ ತೆರೆ ಎಳೆದಿದ್ದರು. ವಾರದ ಹಿಂದಷ್ಟೇ ಲಕ್ಷಾಂತರ ರೂ. ವೆಚ್ಚ ಮಾಡಿ, ಎರಡು ಚಕ್ರಗಳನ್ನು ಹೊಸದಾಗಿ ನಿರ್ಮಿಸಿ ರಥಕ್ಕೆ ಅಳವಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next