Advertisement

Mulki ಶ್ರೀ ವೆಂಕಟರಮಣ ದೇವಸ್ಥಾನ: ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವ

12:01 AM Dec 27, 2023 | Team Udayavani |

ಮೂಲ್ಕಿ: ಒಳಲಂಕೆ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಉಗ್ರನರಸಿಂಹ ದೇವರಿಗೆ ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರಿಂದ ವಿವಿಧ ದ್ರವ್ಯ ಹಾಗೂ ಪಂಚಾಮೃತ ಅಭಿಷೇಕ ನಡೆಸುವ ಮೂಲಕ ವಿವಿಧ ಉತ್ಸವಾದಿಗಳೊಂದಿಗೆ ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವ ಸಂಭ್ರಮ ದಿಂದ ಸಂಪನ್ನ ಗೊಂಡಿತು.

Advertisement

ಮುಂಜಾನೆ ಕ್ಷೇತ್ರಕ್ಕೆ ಆಗಮಿಸಿದ ಶ್ರೀ ಕಾಶೀ ಮಠಾಧೀಶರು ಮಹಾ ಪ್ರಾರ್ಥನೆ ನಡೆದ ಅನಂತರ ವಿವಿಧ ದ್ರವ್ಯಗಳು ಹಾಗೂ ಪಂಚಾಮೃತ ಹಾಗೂ ಸೀಯಾಳ ಅಭಿಷೇಕದೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಿ, ಮಂಗಳಾರತಿ ಮಾಡಿ ಬಳಿಕ ಆಶೀರ್ವಚನವಿತ್ತರು. ಬಳಿಕ ಶ್ರೀಗಳನ್ನು ಕೋಟೇಶ್ವರದ ಮೊಕ್ಕಾಂಗೆ ಬೀಳ್ಕೊಡಲಾಯಿತು.

ನಿರಂತರ ಅಭಿಷೇಕ
ದೇವಸ್ಥಾನದಲ್ಲಿ ಬೆಳಗ್ಗಿನಿಂದ ಸಂಜೆಯ ವರೆಗೆ ನಿರಂತರ ವಿವಿಧ ದ್ರವ್ಯಗಳು ಹಾಗೂ ಭಕ್ತರಿಂದ ಸಮರ್ಪಿತವಾದ ಲಕ್ಷಾಂತರ ಸೀಯಾಳಗಳ ಅಭಿಷೇಕ ನಡೆಯಿತು.

ರಾತ್ರಿ ವಿವಿಧ ಉತ್ಸವ, ಮಹಾಪೂಜೆ ಹಾಗೂ ಭಕ್ತರಿಗೆ ದೇವ ದರ್ಶನದಲ್ಲಿ ಅಭಯ ಪ್ರಸಾದ, ಮಹಾ ಪೂಜೆ, ಭೂರಿ ಭೋಜನ ನಡೆದ ಅನಂತರ ಮಹಾ ರಥೋತ್ಸವ ನಡೆಯಿತು.

ದಕ್ಷಿಣ ಕನ್ನಡ ಮಾತ್ರವಲ್ಲದೆ ಉಡುಪಿ, ಕಾಸರಗೋಡು, ಗುಜರಾತ್‌, ಮುಂಬಯಿ ಮತ್ತಿತರ ಪ್ರದೇಶಗಳ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next