Advertisement

ಭಾರತ “ಎ’ತಂಡಗಳಿಗೆ  ಅಯ್ಯರ್‌, ನಾಯರ್‌ ನಾಯಕರು

06:00 AM May 09, 2018 | Team Udayavani |

ಬೆಂಗಳೂರು: ಐಪಿಎಲ್‌ನಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ಶ್ರೇಯಸ್‌ ಅಯ್ಯರ್‌ ಅವರನ್ನು ಇಂಗ್ಲೆಂಡ್‌ನ‌ಲ್ಲಿ ನಡೆಯುವ ಏಕದಿನ ತ್ರಿಕೋನ ಸರಣಿಗೆ ಭಾರತ “ಎ’ ತಂಡದ ನಾಯಕರನ್ನಾಗಿ ಹೆಸರಿಸಲಾಗಿದೆ. ಇದೇ ವೇಳೆ ನಾಲ್ಕು ದಿನಗಳ ಪಂದ್ಯಗಳಿಗೆ ಕರುಣ್‌ ನಾಯರ್‌ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಕಳೆದ ಕೆಲವು ಋತುಗಳಲ್ಲಿ ಐಪಿಎಲ್‌ ಮತ್ತು ದೇಶೀಯ ಕ್ರಿಕೆಟ್‌ ಕೂಟಗಳಲ್ಲಿ ಉತ್ತಮ ನಿರ್ವಹಣೆ ನೀಡಿದ ಹಲವು ಆಟಗಾರರು ಭಾರತ “ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತ್ರಿಕೋನ ಸರಣಿ ಜೂನ್‌ 22ರಿಂದ ಇಂಗ್ಲೆಂಡ್‌ ಲಯನ್ಸ್‌ (“ಎ’ ತಂಡ) ಮತ್ತು ವೆಸ್ಟ್‌ಇಂಡೀಸ್‌ “ಎ’ ತಂಡದೆದುರು ನಡೆಯುವ ಏಕದಿನ ತ್ರಿಕೋನ ಸರಣಿ ಮೂಲಕ ಭಾರತ “ಎ’ ತಂಡದ ಇಂಗ್ಲೆಂಡ್‌ ಪ್ರವಾಸ ಆರಂಭಗೊಳ್ಳಲಿದೆ. 

ಚತುರ್ದಿನ ಟೆಸ್ಟ್‌, ತ್ರಿದಿನ ಪಂದ್ಯ
ಭಾರತ “ಎ’ ತಂಡವು ಆಬಳಿಕ ಜುಲೈ 16ರಿಂದ 19ರ ವರೆಗೆ ಇಂಗ್ಲೆಂಡ್‌ “ಎ’ ತಂಡದೆದುರು ಚತುರ್ದಿನ ಟೆಸ್ಟ್‌ನಲ್ಲಿ ಆಡಲಿದೆ. ಇದರ ನಡುವೆ ಕೌಂಟಿ ತಂಡಗಳೆದುರು ಕೆಲವು ತ್ರಿದಿನ ಪಂದ್ಯಗಳಲ್ಲಿ ಆಡಲಿದೆ. ಶ್ರೇಯಸ್‌ ಅವರಲ್ಲದೇ ಪೃಥ್ವಿ ಶಾ, ಮಯಾಂಕ್‌ ಅಗರ್ವಾಲ್‌, ಸ್ಯಾಮ್ಸನ್‌, ರಿಷಬ್‌ ಪಂತ್‌, ವಿಜಯ್‌ ಶಂಕರ್‌, ಶಾದೂìಲ್‌ ಠಾಕುರ್‌, ದೀಪಕ್‌ ಚಹರ್‌, ಕೆ. ಗೌತಮ್‌ “ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಾಯರ್‌ ನೇತೃತ್ವದ ತಂಡದಲ್ಲೂ ದೇಶೀಯ ಕ್ರಿಕೆಟಿನ ಪ್ರಮುಖರು ಒಳಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next