Advertisement

ಐಪಿಎಲ್‌ನಲ್ಲಿ ಆಡಲು ಶ್ರೇಯಸ್‌ ಅಯ್ಯರ್‌, ನಟರಾಜನ್‌ಗೆ ಬಿಸಿಸಿಐ ಹಸಿರು ನಿಶಾನೆ

11:20 PM Aug 15, 2021 | Team Udayavani |

ಹೊಸದಿಲ್ಲಿ : ಗಾಯಾಳಾಗಿ ಚೇತರಿಸಿಕೊಂಡ ಶ್ರೇಯಸ್‌ ಅಯ್ಯರ್‌ ಮತ್ತು ಟಿ. ನಟರಾಜನ್‌ ಅವರಿಗೆ ಐಪಿಎಲ್‌ನಲ್ಲಿ ಆಡಲು ಬಿಸಿಸಿಐ ಹಸಿರು ನಿಶಾನೆ ನೀಡಿದೆ. ಇವರಲ್ಲಿ ಅಯ್ಯರ್‌ ಈಗಾಗಲೇ ದುಬಾೖ ತಲುಪಿದ್ದು, ಕ್ವಾರಂಟೈನ್‌ ಮುಗಿಸಿದ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ.

Advertisement

ಐಪಿಎಲ್‌ ನಿಯಮಾವಳಿ ಪ್ರಕಾರ, ಗಾಯಾಳು ಆಟಗಾರರು ಚೇತರಿಸಿ ಕೊಂಡು ಮರಳಿದರೆ ಆಗ ಇವರಿಗೆ ಬದಲಿಯಾಗಿ ಬಂದ ಆಟಗಾರರು ತಂಡದಲ್ಲಿ ಮುಂದುವರಿಯುವಂತಿಲ್ಲ. ಇದನ್ನು ಐಪಿಎಲ್‌ನ ಪ್ರಧಾನ ನಿರ್ವಹಣಾಧಿಕಾರಿ ಹೇಮಾಂಗ್‌ ಅಮಿನ್‌ ಎಲ್ಲ ಫ್ರಾಂಚೈಸಿಗಳಿಗೆ ತಿಳಿಸಿದ್ದಾರೆ. ಜತೆಗೆ ಆ. 20ರ ಒಳಗೆ ತಂಡಗಳ ಅಂತಿಮ ಯಾದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಮೂಲ ಆಟಗಾರರು ಅಥವಾ ಬದಲಿ ಆಟಗಾರರಲ್ಲಿ ಒಬ್ಬರಿಗಷ್ಟೇ ಸ್ಥಾನ ಲಭಿಸಲಿದೆ.
ಚೇತರಿಕೆಗೆ ಧಾರಾಳ ಅವಧಿ
2021ನೇ ಐಪಿಎಲ್‌ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದರಿಂದ ಹಾಗೂ ಇದರ ಪುನರಾರಂಭಕ್ಕೆ ಸಾಕಷ್ಟು ಅವಧಿ ಲಭಿಸಿದ್ದರಿಂದ ಗಾಯಾಳು ಕ್ರಿಕೆಟಿಗರ ಚೇತರಿಕೆಗೆ ಧಾರಾಳ ಅವಕಾಶ ಸಿಕ್ಕಿತ್ತು.

ಇದನ್ನೂ ಓದಿ :ಹೈಟಿ ಸಂತ್ರಸ್ತರಿಗೆ ನವೋಮಿ ಒಸಾಕಾ ಆರ್ಥಿಕ ನೆರವು

Advertisement

Udayavani is now on Telegram. Click here to join our channel and stay updated with the latest news.

Next