Advertisement

Shree Swarnavalli Matha: ಫೆ.22ರಂದು ಶ್ರೀಗಳ ಶಿಷ್ಯ ಸ್ವೀಕಾರ ಸಮಾರಂಭ

03:40 PM Dec 29, 2023 | Team Udayavani |

ಶಿರಸಿ: ತಾಲೂಕಿನ ಸ್ವರ್ಣವಲ್ಲಿ ಶ್ರೀಮಠದ ಪೀಠಾಧೀಶರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರ ಅಪೇಕ್ಷೆ, ಅದೇಶ ಮತ್ತು ಜ್ಯೋತಿಷಿಗಳ ಸಲಹೆಗೆ ಮೇರೆಗೆ ಯಲ್ಲಾಪುರ ತಾಲೂಕಿನ ಈರಾಪುರದ ವಿದ್ವಾನ್ ನಾಗರಾಜ ಭಟ್ಟ ಅವರನ್ನು ಶ್ರೀಗಳವರ ಶಿಷ್ಯರನ್ನಾಗಿ ಸ್ವೀಕರಿಸಲು ತೀರ್ಮಾನಿಸಲಾಗಿದೆ.

Advertisement

ಡಿ.25 ರಂದು ನಡೆದ ಶ್ರೀಮಠದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದೆ. ಶ್ರೀಗಳ ಶಿಷ್ಯ ಸ್ವೀಕಾರದ (ಸನ್ಯಾಸಾಶ್ರಮದ) ಕಾರ್ಯಕ್ರಮ ಮಾಘ ಶುದ್ಧ ತ್ರಯೋದಶಿ ಫೆಬ್ರವರಿ 22 ಗುರುವಾರದಂದು ನಡೆಯಲಿದೆ‌ ಎಂದು ಮಠದ ಆಡಳಿತ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next