Advertisement

UDUPI: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಲಲಿತ ಮಹಾ ತ್ರಿಪುರಸುಂದರಿ ಮಹಾಯಾಗ ಸಂಪನ್ನ

03:25 PM Jul 13, 2023 | Team Udayavani |

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ, ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಲಲಿತ ಮಹಾ ತ್ರಿಪುರಸುಂದರಿ ಮಹಾ ಯಾಗ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಯ ನೇತೃತ್ವದಲ್ಲಿ ಸ್ಥಳೀಯ ಉದ್ಯಮಿ ಯೋರ್ವರ ಪ್ರಾಯಶ್ಚಿತಪೂರ್ವಕವಾಗಿ ಸಂಪನ್ನಗೊಂಡಿತು.

Advertisement

ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿರುವ ಕ್ಷೇತ್ರದಲ್ಲಿ ಸಂಪನ್ನಗೊಂಡ ಈ ಮಹಾನಿಯಾಗ ಬಹು ವಿಶಿಷ್ಟ ಅಪರೂಪ ಆಗಿದೆ.

ಸಹಸ್ರ ಸಹಸ್ರ ಸಂಖ್ಯೆಯ ಕದಳಿಹಣ್ಣನ್ನು ತ್ರಿಮಧುರಯುಕ್ತವಾಗಿ ಹೋಮಿಸಿ, ಲಲಿತಾ ಸಹಸ್ರನಾಮದಿಂದ ಅರ್ಚನೆಯಿಂದ ನೆರವೇರಿದ ಈ ಯಾಗ ಬ್ರಾಹ್ಮಣ ಸುವಾಸನೆ ಆರಾಧನೆ ಕನ್ನಿಕರಾಧನೆ ಆಚಾರ್ಯ ದಂಪತಿ ಕುಮಾರ ಪೂಜೆಗಳು ನೆರವೇರಿತು.

ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸಾಮೂಹಿಕವಾಗಿ ನೆರವೇರಿತು. ಬಹು ಫಲಪ್ರದವಾದ ಬಹು ಅಪರೂವಾದ ಈ ಮಹಾನ್ ಯಾಗದ ಪೂರ್ಣಾವತಿ ವೀಕ್ಷಿಸಲು ಭಕ್ತರು ಕ್ಷೇತ್ರದಲ್ಲಿ ಕಿಕ್ಕಿರಿದು ತುಂಬಿದ್ದರು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next