Advertisement

Udupi: ಸೆ. 27ರಂದು ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಏಕಕಾಲ ಶ್ರೀ ಚಕ್ರ ಮಂಡಲ ಪೂಜೆ

11:55 AM Sep 25, 2023 | Team Udayavani |

ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಸೆಪ್ಟೆಂಬರ್ 27ರ ಬುಧವಾರ ಏಕಕಾಲ ಶ್ರೀ ಚಕ್ರ ಮಂಡಲ ಪೂಜೆ ನೆರವೇರಲಿದೆ.

Advertisement

ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸೇವಾದಾರರ ಬಾಪ್ತು ಕ್ಷೇತ್ರಕ್ಕೆ ಸಮರ್ಪಿತವಾಗಲಿದೆ.

ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಈ ಮಹಾನ್ ಪೂಜೆ ಸೆ.27ರ ಸಂಜೆ 5 ಗಂಟೆಗೆ ಆರಂಭಗೊಳ್ಳಲಿದೆ. ಪೂಜೆಯ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಕನ್ನಿಕಾರಾಧನೆ ನೆರವಿರಲಿದೆ.

ವಿವಿಧ ಹೂಗಳಿಂದ ಅಲಂಕೃತಗೊಂಡ ಮಂಟಪದಲ್ಲಿ ಬೆಳಗಿನ ಮುಹೂರ್ತದಲ್ಲಿ ಚತುರ್ ವಿಂಷತಿ ನಾಳಿಕೇರ ಗಣ ಯಾಗ ಹಾಗೂ ಶ್ರೀಚಕ್ರ ಮಂಡಲ ರಚನೆಗೆ ಬಿಂದು ಪ್ರಕ್ರಿಯೆ ನೆರವೇರಲಿದೆ.

ಮಧ್ಯಾಹ್ನ ಹಾಗೂ ರಾತ್ರಿ ಅನ್ನಪ್ರಸಾದ ವಿತರಣೆಯಾಗಲಿದೆ.

Advertisement

ವಿಶೇಷ ಆಕರ್ಷಣೆಯಾಗಿ ಅಷ್ಟಾವಧಾನ ಸೇವೆಯಲ್ಲಿ ನೃತ್ಯ ಸೇವೆ ಹಾಗೂ ಸುಬ್ರಮಣ್ಯಕಾರಂತ ಮತ್ತು ಬಳಗದವರಿಂದ ವೇದಪಾರಾಯಣ ಸಂಕೀರ್ತನೆ, ನಾಗೇಂದ್ರ ಕುಡುಪು ಅವರಿಂದ ನಾದ ಸೇವೆ, ಮುರಳಿದರ ಮುದ್ರಾಡಿ ಮತ್ತು ತಂಡದವರಿಂದ ನಾದಸ್ವರ ವಾದನ ಮೂಲಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next