Advertisement

ಕಲಾವಿದ ಜಾನ್‌ ಆಲ್ಮೇಡಗೆ ಶ್ರದ್ಧಾಂಜಲಿ

01:51 PM Aug 19, 2020 | Suhan S |

ಮಾಲೂರು: ರಂಗಭೂಮಿ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸಿದ ದಿ.ಜಾನ್‌ ಆಲ್ಮೇಡ ಅವರ ಆದರ್ಶ ಪತ್ರಕರ್ತರು, ಕಲಾವಿದರು ಅಳವಡಿಸಿಕೊಳ್ಳಲಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಸಿ. ಲಕ್ಷ್ಮೀನಾರಾಯಣ್‌ ತಿಳಿಸಿದರು.

Advertisement

ಇತ್ತೀಚಿಗೆ ನಿಧನರಾದ ಜಾನ್‌ ಆಲ್ಮೇಡಗೆ ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ನೇಹ ಜೀವಿ ಜಾನ್‌ಆಲ್ಮೇಡ ಅವರು, ಕನ್ನಡ ಭಾಷಾ ಪ್ರೇಮ ಹಾಗೂ ಪತ್ರಿಕಾ ನಿಷ್ಠೆ ತೋರಿದವರು. ತಂದೆಯ ಕುಲಕಸುಬಿನ ಬಗ್ಗೆ ಅಷ್ಟೊಂದು ಆಸಕ್ತಿ ತೋರದೆ, ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿ, ಕಲೆಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟವರು ಎಂದು ಹೇಳಿದರು.

ಭುವನೇಶ್ವರಿ ಕನ್ನಡ ಕಲಾ ಸಂಘದ ಅಧ್ಯಕ್ಷ ಎಂ.ವಿ.ಹನುಮಂತಯ್ಯ, ಸಾಹಿತಿ ಎಂ.ವಿ.ತಮ್ಮಯ್ಯ ಮಾತನಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ವಿ.ಲೋಕೇಶ್‌, ಉಪಾಧ್ಯಕ್ಷ ಎಸ್‌.ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ಎಂ.ವಿಜಯಕುಮಾರ್‌, ಖಜಾಂಚಿ ಭರತ್‌ಭೂಷಣ್‌, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ರವಿಕುಮಾರ್‌, ಎಂ.ವಿ.ರವೀಂದ್ರ, ಮಾಜಿ ಅಧ್ಯಕ್ಷ ರಾಜೇಂದ್ರ ವೈದ್ಯ, ಮಾಜಿ ಉಪಾಧ್ಯಕ್ಷ ಲಕ್ಕೂರು ವಿ.ಶ್ರೀನಿವಾಸ್‌, ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಎಚ್‌.ಎಲ್‌.ಲೋಕೇಶ್‌, ನಿವೃತ್ತ ಉಪನ್ಯಾಸಕಎಂ.ವಿ.ನಾಗರಾಜಯ್ಯ, ಭುವನೇಶ್ವರಿ ಕನ್ನಡ ಕಲಾಸಂಘದ ನಾಗರಾಜಗೌಡ, ಪ್ರತಾಪ್‌, ಪತ್ರಕರ್ತರ ಸಂಘದ ಕಾರ್ಯದರ್ಶಿ ಮಾರುತೇಶ್‌ ಕುಮಾರ್‌, ಸದಸ್ಯರಾದ ಟಿ.ಕೆ.ನಾಗರಾಜ್‌, ಕೋಟೆ ಮುನಿರಾಜು, ನಟರಾಜು, ವಿ.ನಾರಾಯಣಮ್ಮ, ಮುನಿನಾರಾಯಣ, ಸುಬ್ರಮಣಿ, ಸಂಘರ್ಷ, ನಂಜಂಡಪ್ಪ, ನಾರಾಯಣಮ್ಮ, ನಟರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next