Advertisement

ರೈತ ಹೋರಾಟಗಾರರಿಗೆ ಶ್ರದ್ಧಾಂಜಲಿ

12:22 PM Oct 15, 2021 | Team Udayavani |

ತಿಪಟೂರು: ನಗರದ ನಗರಸಭೆ ಮುಂಭಾಗದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ, ರೈತ, ಕೃಷಿಕಾರ್ಮಿಕ ಸಂಘಟನೆ, ರೈತ ಸಂಘಟನೆಯಿಂದ ಉತ್ತರ ಪ್ರದೇಶದ ಹುತಾತ್ಮ ರೈತರಿಗೆ ಮೇಣದ ಬತ್ತಿ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ರೈತ, ಕೃಷಿ, ಕಾರ್ಮಿಕ ಸಂಘಟನೆಯ ಜಿಲ್ಲಾ ಸಂಚಾಲಕ ಎಸ್‌.ಎನ್‌.ಸ್ವಾಮಿ ಮಾತನಾಡಿ, ಉತ್ತರ ಪ್ರದೇಶದ ಲಖೀಂಪುರ್‌ಖೇರ್‌ನಲ್ಲಿ ಶಾಂತಿಯುತ ಪ್ರತಿಭಟನೆ ಮುಗಿಸಿ, ತೆರಳುತ್ತಿದ್ದ ರೈತ ಹೋರಾಟಗಾರರ ಮೇಲೆ ಮಂತ್ರಿ ಮಗ ಕಾರು ಹರಿಸಿ ಕೊಂದಿರುವುದು ಅಮಾನವೀಯ ಕೃತ್ಯವಾಗಿದೆ.

ಹುತಾತ್ಮರಾದ ಲವ್‌ ಪ್ರೀತಸಿಂಗ್‌, ದಲ್ಜತ್‌ ಸಿಂಗ್‌, ನಚ್‌ರತ್‌ಸಿಂಗ್‌, ಗುರ್‌ವಿಂದರ್‌ ಸಿಂಗ್‌ ಹಾಗೂ ರಮಣ್‌ಕಶ್ಯಪ್‌ ಸೇರಿ ಒಟ್ಟು ಐದು ಜನರು ಹುತಾತ್ಮರಾಗಿದ್ದು, ಸರ್ಕಾರಗಳು ರೈತರ ಹಿತಕಾಯುವ ಕೆಲಸ ಮಾಡದೆ, ಅವರನ್ನು ಕ್ರೂರಿಗಳಂತೆ ಕಾಣುತ್ತಿರುವುದು ಖಂಡನೀಯ. ಹುತಾತ್ಮರಾದವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ರೈತ ಸಂಘದ ತಿಮ್ಲಾಪುರ ದೇವರಾಜು, ಬೆಲೆಕಾವಲು ಸಮಿತಿಯ ಶ್ರೀಕಾಂತ್‌ ಕೆಳಹಟ್ಟಿ, ಮನೋಹರ್‌ ಪಟೇಲ್‌, ಚಂದನ್‌, ರಂಗಧಾಮಯ್ಯ, ಪೃಥ್ವಿ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next