Advertisement

ಚಾಕು ತೋರಿಸಿ ಮೊಬೈಲ್‌ ಕಿತ್ತರು!

10:00 AM Dec 07, 2019 | Sriram |

ಬೆಂಗಳೂರು:ಡ್ರಾಪ್‌ ಪಡೆಯುವ ನೆಪದಲ್ಲಿ ಬೈಕ್‌ನಲ್ಲಿ ಕುಳಿತ ದುಷ್ಕರ್ಮಿಯೊಬ್ಬ ಸ್ವಲ್ಪ ದೂರ ಹೋಗುತ್ತಿದ್ದಂತೆ ಬೈಕ್‌ ಸವಾರನಿಗೆ ಚಾಕುತೋರಿಸಿ ಹೆದರಿಸಿ ಬೈಕ್‌,ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜೀವನ್‌ ಭೀಮಾ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಈ ಕುರಿತು ಖಾಸಗಿ ಕಂಪೆನಿ ಉದ್ಯೋಗಿ ದೊಮ್ಮಲೂರಿನ ಪ್ರವೀಣ್‌ ಸಿ.ಎಂ ಎಂಬುವವರು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನ.30ರಂದು ರಾತ್ರಿ 12 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ತಮ್ಮ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಧೂಪನಹಳ್ಳಿ ಬಸ್‌ನಿಲ್ದಾಣದಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿ ಕೈ ಅಡ್ಡ ಹಾಕಿದ್ದು ಇಸ್ಲಾಂಪುರಕ್ಕೆ ಡ್ರಾಪ್‌ ನೀಡುವಂತೆ ಮನವಿ ಕೇಳಿಕೊಂಡಿದ್ದಾನೆ.

ಆತನ ಮಾತನ್ನು ನಂಬಿದ ಪ್ರವೀಣ್‌ ಬೈಕ್‌ನಲ್ಲಿ ಕುಳ್ಳಿರಿಸಿಕೊಂಡಿದ್ದಾರೆ. ನಲ್ಲೂರು ಪುರಂ ಸರ್ಕಾರಿ ಶಾಲೆಯ ಸಮೀಪ ಬಂದಾಗ ಮೂತ್ರವಿಸರ್ಜನೆಗೆಂದು ಪ್ರವೀಣ್‌ ಬೈಕ್‌ ನಿಲ್ಲಿಸಿದ್ದಾರೆ.

ಈ ವೇಳೆ ಚಾಕು ತೋರಿಸಿ ಕೊಲ್ಲುವುದಾಗಿ ಹೆದರಿಸಿದ ದುಷ್ಕರ್ಮಿ, ಅವರ ಬಳಿಯಿದ್ದ ಮೊಬೈಲ್‌, ಬ್ಯಾಂಕ್‌ ಡೆಬಿಟ್‌ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಕಿತ್ತುಕೊಂಡು ಬೈಕ್‌ ಸಮೇತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next