Advertisement

ವಿಶ್ವನಾಥ್‌ ಹಣ ಪಡೆದಿದ್ದರೆ ಸಾಕ್ಷಿ ತೋರಿಸಿ: ಶೆಟ್ಟರ್‌

11:06 PM Jul 20, 2019 | Team Udayavani |

ಬೆಂಗಳೂರು: ಎಚ್‌. ವಿಶ್ವನಾಥ್‌ ಅವರು ಬಿಜೆಪಿಯವರಿಂದ ಹಣ ಪಡೆದುಕೊಂಡಿದ್ದರೆ, ಸಾ.ರಾ. ಮಹೇಶ್‌ ಸಾಕ್ಷಿ ತೋರಿಸಲಿ ಎಂದು ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ ಆಗ್ರಹಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು , ಎಚ್‌.ವಿಶ್ವನಾಥ್‌ ಅವರು ಹಿರಿಯರು.

Advertisement

ಅವರ ಬಗ್ಗೆ ಜನರಿಗೆ ಗೌರವ ಇದೆ. ಸಾ.ರಾ. ಮಹೇಶ್‌ ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಮೈತ್ರಿ ಸರ್ಕಾರದ ನಾಯಕರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ, ಜನರು ಉಗಿಯುತ್ತಿದ್ದಾರೆ.

ಸ್ಪೀಕರ್‌ ರಮೇಶ್‌ ಕುಮಾರ್‌ ಸೋಮವಾರ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಮುಕ್ತಾಯಗೊಳಿಸುವುದಾಗಿ ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ನಾವು ಸುಮ್ಮನಿದ್ದೇವೆ. ವಿಶ್ವಾಸ ಮತ ಯಾಚನೆ ಮಾಡದೇ ಹೋದರೆ, ಸೋಮವಾರ ಸಂಜೆ ಏನು ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next