Advertisement

4 ರಂದು ಮೋದಿಗೆ ಕಪ್ಪು ಬಾವುಟ; ಸಾ.ರಾ.ಗೋವಿಂದು ಕರೆ 

04:28 PM Jan 25, 2018 | |

ಬೆಂಗಳೂರು: ‘ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು. ಹೀಗಾಗಿ ಫೆಬ್ರವರಿ 4ರಂದು ಅವರು ರಾಜ್ಯಕ್ಕೆ ಬರಲಿದ್ದು ಎಲ್ಲಾ ಹೋರಾಟಗಾರರು ಇದೇ ರೀತಿಯಲ್ಲಿ ಜೊತೆ ಸೇರಿ ಕಪ್ಪು ಬಾವುಟಗಳನ್ನು ಪ್ರದರ್ಶಿಸಬೇಕು’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಕರೆ ನೀಡಿದ್ದಾರೆ.

Advertisement

ಕರ್ನಾಟಕ ಬಂದ್‌ ಹಿನ್ನಲೆಯಲ್ಲಿ ಕಫ್ರೀಡಂ ಪಾರ್ಕ್‌ನಲ್ಲಿ ನಡೆದ ಕನ್ನಡ ಒಕ್ಕೂಟಗಳ ಪ್ರತಿಭಟನೆಯಲ್ಲಿ ಮಾತನಾಡಿದ ಗೋವಿಂದು ಈ ಕರೆ ನೀಡಿದ್ದಾರೆ.

ಇದೇ ವೇಳೆ ‘ಕನ್ನಡ ಪರ ಹೋರಾಟಗಾರರು ಮಾರಟವಾಗುವ ವಸ್ತುವನ್ನು ಯಾರ ಪ್ರಚೋದನೆಯಿಂದ ನಾವು ಬಂದ್‌ ಕರೆ ನೀಡಿಲ್ಲ. ನಾಡು ನುಡಿಯ ಹಿತಕ್ಕಾಗಿ ಸದಾ ಹೋರಾಟ ಮಾಡುವವರು ನಾವು’ ಎಂದು ಕಿಡಿ ಕಾರಿದರು. 

ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಟೌನ್‌ ಹಾಲ್‌ನಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next