Advertisement

Omar Abdullah ವಿರುದ್ಧ ರಾಜನಾಥ್ ಸಿಂಗ್ ಕಿಡಿ: ಅಫ್ಜಲ್ ಗುರುವನ್ನು ಸಮ್ಮಾನಿಸಬೇಕಿತ್ತೇ?

01:22 AM Sep 09, 2024 | Team Udayavani |

ರಾಮ್‌ಬನ್‌: 2001 ರ ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ಕುರಿತು ನ್ಯಾಷನಲ್ ಕಾನ್ಫರೆನ್ಸ್ (NC) ನಾಯಕ ಒಮರ್ ಅಬ್ದುಲ್ಲಾ ಅನುಕಂಪ ಬೀರಿ ನೀಡಿದ ಹೇಳಿಕೆಗೆ ರಕ್ಷಣ ಸಚಿವ, ಬಿಜೆಪಿಯ(BJP) ಹಿರಿಯ ನಾಯಕ ರಾಜನಾಥ್ ಸಿಂಗ್ ರವಿವಾರ (ಸೆ.8)ಕಿಡಿ ಕಾರಿದ್ದಾರೆ.

Advertisement

ಜಮ್ಮು ಮತ್ತು ಕಾಶ್ಮೀರದ ರಾಮ್‌ಬನ್‌ನಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್ “ಒಮರ್ ಅಬ್ದುಲ್ಲಾ ಅವರು ಇಂತಹ ಹೇಳಿಕೆಗಳನ್ನು ನೀಡಿರುವುದು ದುರದೃಷ್ಟಕರವಾಗಿದೆ, ಅಫ್ಜಲ್ ಗುರುವನ್ನು ಗಲ್ಲಿಗೇರಿಸಬಾರದಾಗಿದ್ದರೆ, ನಾವು ಏನು ಮಾಡಬೇಕಿತ್ತು? ನಾವು ಅವರಿಗೆ ಸಾರ್ವಜನಿಕವಾಗಿ ಹಾರ ಹಾಕಿ ಸಮ್ಮಾನಿಸಬೇಕೇ?” ಎಂದು ಪ್ರಶ್ನಿಸಿದ್ದಾರೆ.

”ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಜಮ್ಮು ಮತ್ತು ಕಾಶ್ಮೀರವನ್ನು ಎಟಿಎಂನಂತೆ ಬಳಸಿಕೊಂಡಿವೆ ಮತ್ತು ರಾಜ್ಯವನ್ನು ಲೂಟಿ ಮಾಡಿವೆ ” ಎಂದು ರಾಜನಾಥ್ ಸಿಂಗ್ ಕಿಡಿ ಕಾರಿದರು.

ಪಿಒಕೆ ನಿವಾಸಿಗಳು ಭಾರತಕ್ಕೆ ಬನ್ನಿ

ಪಾಕ್‌ ಆಕ್ರಮಿಕ ಕಾಶ್ಮೀರ (ಪಿಒಕೆ)ದ ನಿವಾಸಿಗಳೇ ಭಾರತಕ್ಕೆ ಬನ್ನಿ, ಇಲ್ಲೇ ನೆಲೆಸಿ. ಪಾಕಿಸ್ಥಾನವು ನಿಮ್ಮನ್ನು ವಿದೇಶಿಗರು ಎಂದರೂ ನಾವು ಮಾತ್ರ ನಿಮ್ಮನ್ನು ಭಾರತೀಯರೆಂದೇ ಪರಿಗಣಿಸಿದ್ದೇವೆ’ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

Advertisement

ಉಗ್ರವಾದ ನಿಲ್ಲಿಸಿದರೆ ಪಾಕ್‌ ಜತೆ ಮಾತುಕತೆ
ಪಾಕ್‌ ಜತೆ ಮಾತುಕತೆ ನಡೆಸಬೇಕೆಂದು ಹಲವರು ಹೇಳುತ್ತಾರೆ. ಅದಕ್ಕೆ ಮೊದಲು ಪಾಕ್‌ ಉಗ್ರವಾದವನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು. ನೆರೆಯ ರಾಷ್ಟ್ರದೊಂದಿಗೆ ಒಳ್ಳೆಯ ಸಂಬಂಧವಿರಬೇಕೆಂದು ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಅದಕ್ಕೆ ಮುನ್ನ ಪಾಕ್‌ ಈ ಷರತ್ತನ್ನು ಪಾಲಿಸಬೇಕು. ಕಾಶ್ಮೀರದಲ್ಲಿ ಉಗ್ರ ಕೃತ್ಯಗಳಿಗೆ ಶೇ. 85ರಷ್ಟು ಮಂದಿ ಮುಸ್ಲಿಮರೇ ಬಲಿಯಾಗಿದ್ದಾರೆ. ನಾನು ಗೃಹ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ನನಗೆ ವಾಸ್ತವ ತಿಳಿದಿದೆ ಎಂದರು.

ಒಮರ್ ಅಬ್ದುಲ್ಲಾ ಅವರು ”ಅಫ್ಜಲ್ ಗುರುವನ್ನು ಗಲ್ಲಿಗೇರಿಸುವುದಕ್ಕೆ ಯಾವುದೇ ಉದ್ದೇಶವಿಲ್ಲ ಎಂದು ನಂಬಿದ್ದೇನೆ ಮತ್ತು ಹಿಂದಿನ ಜಮ್ಮು ಮತ್ತು ಕಾಶ್ಮೀರ ಸರಕಾರವು ಆತನನ್ನು ಗಲ್ಲಿಗೇರಿಸುವುದನ್ನು ಅನುಮೋದಿಸುತ್ತಿರಲಿಲ್ಲ ಎಂದು ಹೇಳಿದ್ದರು.

2001,ಡಿಸೆಂಬರ್ 13 ರಂದು ಸಂಸತ್ ಭವನದ ಮೇಲಿನ ದಾಳಿಯ ಸಂಚು ರೂಪಿಸಿದ್ದಕ್ಕಾಗಿ 2013 ಫೆಬ್ರವರಿ 9 ರಂದು ದೆಹಲಿಯ ತಿಹಾರ್ ಜೈಲಿನಲ್ಲಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next