Advertisement

ಕರುಣಾ ಅಂತ್ಯಕ್ರಿಯೆಗೆ ಸಿಎಂ, ಸಚಿವರು ಯಾಕೆ ಬರಲಿಲ್ಲ ? ರಜನಿ ಆಕ್ರೋಶ

12:24 PM Aug 14, 2018 | Team Udayavani |

ಚೆನ್ನೈ : ಡಿಎಂಕೆ ಅಧ್ಯಕ್ಷ  ದಿವಂಗತ ಎಂ ಕರುಣಾನಿಧಿ ಅವರ ಅಂತ್ಯಕ್ರಿಯೆಯಲ್ಲಿ ತಮಿಳು ನಾಡು ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಚಿವರು ಪಾಲ್ಗೊಳ್ಳದೇ ಇರುವುದನ್ನು ನಟ, ರಾಜಕಾರಣಿ ರಜನೀಕಾಂತ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮರೀನಾ ಬೀಚ್‌ನಿಂದ ಇವರೆಲ್ಲ  ದೂರ ಉಳಿದದ್ದಾರೂ ಏಕೆ ಎಂದವರು ಪ್ರಶ್ನಿಸಿದ್ದಾರೆ.

Advertisement

”ಕರುಣಾನಿಧಿ ಅಂತ್ಯಕ್ರಿಯೆಗೆ ಇಡಿಯ ಭಾರತವೇ ಬಂದಿತ್ತು. ಭಾರತೀಯ ಸೇನೆಯ ಮೂರೂ ದಳಗಳಿಂದ ಸರಕಾರಿ ಗೌರವ ಸಲ್ಲಿಸಲಾಗಿತ್ತು. 21 ಗನ್‌ ಸೆಲ್ಯೂಟ್‌ ನೀಡಲಾಗಿತ್ತು. ರಾಜ್ಯಪಾಲರು, ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮುಂತಾಗಿ ಎಲ್ಲರೂ ಬಂದಿದ್ದರು. ಆದರೆ ರಾಜ್ಯದ ಪ್ರಥಮ ಪ್ರಜೆಯಾಗಿರುವ ಮುಖ್ಯಮಂತ್ರಿಗಳು ಏಕೆ ಬರಲಿಲ್ಲ ? ಅವರ ಸಂಪುಟ ಸದಸ್ಯರು ಏಕೆ ಬರಲಿಲ್ಲ ? ಜನರು ಇದನ್ನು ಏನೆಂದು ತಿಳಿಯುತ್ತಾರೆ ?” ಎಂದು ರಜನೀಕಾಂತ್‌ ಕೇಳಿದ್ದಾರೆ. 

ಕರುಣಾನಿಧಿಯವರ ಅಂತ್ಯಕ್ರಿಯೆಗೆ ಮರೀನಾ ಬೀಚ್‌ನಲ್ಲೇ ಸ್ಥಳಾವಕಾಶ ಕಲ್ಪಿಸಬೇಕೆಂಬ ಮದ್ರಾಸ್‌ ಹೈಕೋರ್ಟ್‌ ತೀರ್ಪಿನ ವಿರುದ್ಧ  ಒಂದೊಮ್ಮೆ ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಅಪೀಲು ಹೋಗಿದ್ದಲ್ಲಿ  ನಾನು ಪ್ರತಿಭಟನೆಯನ್ನು ಆರಂಭಿಸುತ್ತಿದ್ದೆ ಎಂದು ರಜನೀಕಾಂತ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next