Advertisement

ಬಿಯರ್‌ ಬಾಟಲ್‌ನಿಂದ ಹೊಡೆದು ಕೊಲೆ

12:23 AM May 02, 2019 | Team Udayavani |

ಬೆಂಗಳೂರು: ಕೆಲ ದಿನಗಳ ಹಿಂದೆ ತಮ್ಮನ್ನು ಗುರಾಯಿಸಿದ್ದ ಎಂಬ ಕಾರಣಕ್ಕೆ ಗುಂಪೊಂದು, ಯುವಕನ ತಲೆಗೆ ಬಿಯರ್‌ ಬಾಟಲ್‌ನಿಂದ ಹೊಡೆದು ಕೊಂದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಜೆ.ಪಿ.ನಗರ ನಿವಾಸಿ ಮಂಜುನಾಥ್‌ (21) ಕೊಲೆಯಾದ ಯುವಕ. ಏ.25ರಂದು ರಾತ್ರಿ ವಿನಾಯಕ ಬ್ಯಾಂಕ್‌ ಲೇಔಟ್‌ನಲ್ಲಿ ದುಷ್ಕರ್ಮಿಗಳ ಗುಂಪು ಮಂಜುನಾಥ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದು, ಏ.27ರಂದು ಚಿಕಿತ್ಸೆ ಫ‌ಲಿಸದೆ ಮಂಜುನಾಥ್‌ ಮೃತಪಟ್ಟಿದ್ದಾರೆ.

ದುಷ್ಕರ್ಮಿಗಳ ತಂಡ ಮಂಜುನಾಥ್‌ ಮೇಲೆ ಹಲ್ಲೆ ನಡೆಸಿದ್ದನ್ನು ಆತನ ಸ್ನೇಹಿತ ಜಗನ್ನಾಥ್‌ ನೋಡಿ ಭಯಗೊಂಡಿದ್ದಾನೆ. ಗಲಾಟೆ ಬಗ್ಗೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದ ಆತ ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಭಯದಿಂಧ ಮನೆಗೆ ಹೋಗಿದ್ದ.

ಈ ಕುರಿತು ಜಗನ್ನಾಥ್‌ ನೀಡಿರುವ ದೂರು ಆಧರಿಸಿ ಮೈಕೋ ಲೇಔಟ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು,ಆರೋಪಿಗಳಾದ ನಂದ, ಅರ್ಜುನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಮೃತ ಮಂಜುನಾಥ್‌ ಹಾಗೂ ಜಗನ್ನಾಥ್‌ ಏ.25ರಂದು ರಾತ್ರಿ 7 ಗಂಟೆ ಸುಮಾರಿಗೆ ವಿಜಯ ಬ್ಯಾಂಕ್‌ ಲೇಔಟ್‌ನಲ್ಲಿರುವ ಬಾರ್‌ಗೆ ಹೋಗಿ, ಮದ್ಯ ಖರೀದಿಸಿದ್ದು, ಮದ್ಯ ಸೇವಿಸಲು ಸಮೀಪದ, ನಿರ್ಮಾಣ ಹಂತದ ಕಟ್ಟಡಕ್ಕೆ ತೆರಳಿದ್ದಾರೆ. ಇದೇ ವೇಳೆ ಕಟ್ಟಡದ ಮೊದಲನೇ ಮಹಡಿಯಲ್ಲಿ ನಾಲ್ವರು ಯುವಕರು ಮದ್ಯ ಸೇವಿಸುತ್ತಿದ್ದರು.

Advertisement

ಮಂಜುನಾಥ್‌ನನ್ನು ನೋಡಿದ ಯುವಕರು ಮೇಲೆ ಬಾ ಎಂದು ಕರೆದಿದ್ದಾರೆ. ಅಲ್ಲಿಗೆ ಹೋದ ಬಳಿಕ, 15 ದಿನಗಳ ಹಿಂದೆ ಮದ್ಯ ಸೇವಿಸುವಾಗ ಗುರಾಯಿಸಿದ್ದು ಯಾಕೆ? ಎಂದು ಏಕಾಏಕಿ ಒಬ್ಬ ಅತನ ಮುಖಕ್ಕೆ ನಾಲ್ಕೈದು ಬಾರಿ ಹೊಡೆದಿದ್ದಾನೆ.

ಈ ವೇಳೆ ಮತ್ತೂಬ್ಬ, ಬಿಯರ್‌ ಬಾಟಲ್‌ನಿಂದ ಮುಖ ಹಾಗೂ ತಲೆಗೆ ಹೊಡೆದಿದ್ದಾನೆ. ಕ್ಷಮಿಸಿ ಎಂದು ಕೇಳಿಕೊಂಡರೂ ಬಿಡದೆ ಮನಬಂದಂತೆ ಥಳಿಸಿದ್ದಾರೆ. ರಕ್ಷಣೆಗೆ ಹೋದ ತನ್ನ ಮೇಲೂ ಹಲ್ಲೆ ನಡೆಸಿದರು ಎಂದು ಜಗನ್ನಾಥ್‌ ದೂರಿನಲ್ಲಿ ತಿಳಿಸಿರುವುದಾಗಿ ಎಂದು ಹಿರಿಯ ಅಧಿಕಾರಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next