Advertisement

Police Sub Inspector ಮರುಪರೀಕ್ಷೆಗೆ ಕಡಿಮೆ ಕಾಲಾವಕಾಶ: ಅವೈಜ್ಞಾನಿಕ ನಿರ್ಧಾರ: ವಿಜಯೇಂದ್ರ

09:23 PM Nov 27, 2023 | Team Udayavani |

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳ ಮರುಪರೀಕ್ಷೆಗೆ ಅತ್ಯಂತ ಕಡಿಮೆ ಕಾಲಾವಕಾಶ ನಿಗದಿ ಮಾಡಿರುವುದು ಸರ್ಕಾರದ ಅವೈಜ್ಞಾನಿಕ ನಿರ್ಧಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

Advertisement

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಅವರು, ದಿನಾಂಕ ವಿಸ್ತರಿಸುವಂತೆ ಸಿಎಂ ಜನತಾ ದರ್ಶನ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದವರನ್ನು ಅಮಾನವೀಯವಾಗಿ ನಡೆಸಿಕೊಂಡು ಬಂಧಿಸಿರುವುದು ಖಂಡನೀಯ.

ಪರೀಕ್ಷಾ ಹಗರಣದಿಂದ ಈಗಾಗಲೇ ಹೈರಾಣಾಗಿ ಹೋಗಿರುವ ಆಕಾಂಕ್ಷಿಗಳ ಮನವಿ ನ್ಯಾಯ ಸಮ್ಮತವಾಗಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಾನುಭೂತಿಯಿಂದ ಪರಿಶೀಲಿಸಬೇಕಿತ್ತು. ಅದನ್ನು ಬಿಟ್ಟು ಬಂಧಿಸಿದ್ದಾರೆ. ಇದು ಅಮಾಯಕ ನಿರುದ್ಯೋಗಿ ಯುವಕರ ಬಗ್ಗೆ ಕಾಂಗ್ರೆಸ್‌ ಹೊಂದಿರುವ ಧೋರಣೆಯನ್ನು ಅನಾವರಣಗೊಳಿಸಿದೆ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next