Advertisement

ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ: ಹೊತ್ತಿ ಉರಿದ ಕಾರು

05:42 PM Jan 04, 2020 | Team Udayavani |

ನೆಲ್ಯಾಡಿ: ಚಲಿಸುತ್ತಿದ್ದ ಕಾರಿನಲ್ಲಿ ಶಾರ್ಟ್ ಸರ್ಕ್ಯುಟ್ ಸಂಭವಿಸಿ ಕಾರು ಹೊತ್ತಿ ಉರಿದ ಘಟನೆ ಶಿರಾಡಿಯ ಕೊಡ್ಯಾಕಲ್ ಎಂಬಲ್ಲಿ ನಡೆದಿದೆ.

Advertisement

ಉಪ್ಪಿನಂಗಡಿ ಸಮೀಪದ ಆತೂರು – ರಾಮಕುಂಜ ನಿವಾಸಿ ಪ್ರವೀಣ್ ಎಂಬವರು ಬೆಂಗಳೂರಿನಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಶಿರಾಡಿಯ ಕೊಡ್ಯಾಕಲ್ ಎಂಬಲ್ಲಿ ಶಾರ್ಟ್ ಸರ್ಕ್ಯುಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.

ಕಾರಿನಲ್ಲಿ ಪ್ರವೀಣ್ ಅವರೊಬ್ಬರೇ ಸಂಚರಿಸುತ್ತಿದ್ದರು. ಯಾವುದೇ ಜೀವಹಾನಿ ಸಂಭವಿಸಿಲ್ಲ.

ಘಟನೆಯಿಂದಾಗಿ ಹೆದ್ದಾರಿಯಲ್ಲಿ ಸ್ವಲ್ಪ ಸಮಯ ರಸ್ತೆ ತಡೆಯುಂಟಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next