Advertisement

ಶ್ರೀನಗರದ ಪ್ಯಾರಿಂಪೋರಾದಲ್ಲಿ ವ್ಯಾಪಾರಿಯನ್ನು ಕೊಂದ ಉಗ್ರರು

09:45 AM Aug 31, 2019 | keerthan |

ಶ್ರೀನಗರ: ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದ ಹೊರವಲಯದ ಪ್ಯಾರಿಂಪೋರಾದಲ್ಲಿ ಉಗ್ರರು ಅಂಗಡಿ ವ್ಯಾಪಾರಿಯನ್ನು ಹತ್ಯೆಗೈದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

Advertisement

ತಡರಾತ್ರಿಯವರೆಗೂ ಅಂಗಡಿ ತೆರೆದಿದ್ದ ವ್ಯಾಪಾರಿಯನ್ನು ಉಗ್ರರು ಕೊಂದಿದ್ದು, ಉಗ್ರರ ಪತ್ತೆಗಾಗಿ ಸ್ಥಳಿಯ ಪೊಲೀಸರು ಮತ್ತು ಭಾರತೀಯ ಸೇನೆ ತಲಾಶ್‌ ಆರಂಭಸಿದೆ.

ಗಂಭೀರವಾಗಿ ಗಾಯಗೊಂಡಿದ್ದ ವ್ಯಾಪಾರಿಯನ್ನು ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರಲ್ಲಿ ಆತ ಅಸುನೀಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದು, ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next