Advertisement

ಅಂಗಡಿ ಮುಚ್ಚಿಸುವುದಕ್ಕೆ ವರ್ತಕರ ಆಕ್ಷೇಪ

07:20 PM Apr 24, 2021 | Adarsha |

ಭದ್ರಾವತಿ: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಹೊರಡಿಸಿರುವ ಆದೇಶದ ಮೇರೆಗೆ ನಗರದಲ್ಲಿ ಪೊಲೀಸರು ಹಾಗೂನಗರಸಭೆಯವರು ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳನ್ನುಹೊರತುಪಡಿಸಿ ಉಳಿದಂತೆ ಬಟ್ಟೆ ಅಂಗಡಿ,ಥಿಯೇಟರ್‌ಮುಂತಾದವುಗಳನ್ನು ಶುಕ್ರವಾರ ಮುಚ್ಚಿಸಿದರು.

Advertisement

ಈ ಸಂದರ್ಭದಲ್ಲಿ ಕೆಲವು ವರ್ತಕರು ಆಕ್ಷೇಪ ವ್ಯಕ್ತಪಡಿಸಿಈಗಾಗಲೇ ಹಿಂದೆ ಲಾಕ್‌ ಡೌನ್‌ ಮಾಡಿದ್ದರಿಂದ ವ್ಯಾಪಾರವಹಿವಾಟು ಕುಸಿದಿದ್ದು ಈಗ ಪುನಃ ಈ ರೀತಿ ಬಾಗಿಲುಹಾಕಿಸುವುದರಿಂದ ಜನರಿಗೆ ಮತ್ತು ವರ್ತಕರಿಗೆ ಕಷ್ಟವಾಗುತ್ತದೆಎಂದು ಆಕ್ಷೇಪ ವ್ಯಕ್ತಪಡಿಸಿದರು.ಸರ್ಕಾರ ಮದ್ಯ, ಮಾಂಸ, ಮೊಟ್ಟೆ ಇವುಗಳ ಮಾರಾಟಕ್ಕೆಅನುಮತಿ ನೀಡಿದೆ.

ಆದರೆ ಬಡ ಮಧ್ಯಮ ವರ್ಗದ ಜನರುಹಾಗೂ ರೋಗಿಗಳು ಬೇಕರಿಯಿಂದ ಒಯ್ಯುವ ಬ್ರೆಡ್‌, ಬನ್ನುಗಳಿಗೆಅವಕಾಶ ನೀಡದೆ ಬೇಕರಿಯನ್ನು ಮುಚ್ಚಿಸುತ್ತಿರುವುದು ಸರಿಯದಕ್ರಮವಲ್ಲ, ಬೇಕರಿ ಐಟಂ ಅನ್ನು ಮಾರಾಟ ಮಾಡಲು ಅವಕಾಶನೀಡಬೇಕೆಂದು ಆಗ್ರಹಿಸಿ ಕೆಲವು ಬೇಕರಿ ಅಂಗಡಿ ಮಾಲೀಕರುಬೇಕರಿಗಳನ್ನು ಮುಚ್ಚದೆ ವ್ಯಾಪಾರ- ವಹಿವಾಟು ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next