Advertisement

ರಾಂಚಿಯಲ್ಲಿ ಗುಂಡಿನ ಮಳೆ: ಮಾಜಿ ಮೇಯರ್‌ ಸೇರಿ ನಾಲ್ವರ ಭೀಕರ ಹತ್ಯೆ 

09:16 AM Mar 22, 2017 | |

ರಾಂಚಿ : ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಧನ್‌ಬಾದ್‌ನ ಮಾಜಿ ಮೇಯರ್‌,ಕಾಂಗ್ರೆಸ್‌ ನಾಯಕ  ನೀರಜ್‌ ಸಿಂಗ್‌ ಮತ್ತು ನಾಲ್ವರನ್ನು  ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ನಗರದಲ್ಲಿ ಮಂಗಳವಾರ ಸಂಜೆ ನಡೆದಿದೆ.

Advertisement

ನೀರಜ್‌ ಸಿಂಗ್‌ ಅವರು ಬರುತ್ತಿದ್ದ ಕಾರನ್ನು ಗುರಿಯಾಗಿರಿಸಿಕೊಂಡು ಎಕೆ 47 ಧಾರಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಕಾರಿನಲ್ಲಿದ್ದ ಮಾಜಿ ಉಪ ಮೆಯರ್‌ ಅಶೋಕ್‌ ಯಾದವ್‌ , ಕಾರಿನ ಚಾಲಕ ಮತ್ತು ಗನ್‌ಮ್ಯಾನ್‌ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಾಲ್ವರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಕೊನೆಯುಸಿರೆಳೆದಿದ್ದರು. 

ನೀರಜ್‌ ಸಿಂಗ್‌ ಅವರ ದೇಹದಲ್ಲಿ 17 ಗುಂಡುಗಳು ಹೊಕ್ಕಿದ್ದು ,ಸ್ಥಳದಲ್ಲಿ 50 ಗುಂಡುಗಳು ಪತ್ತೆಯಾಗಿರುವುದು ದಾಳಿಯ ಭೀಕರತೆಯನ್ನು ಸೂಚಿಸುತ್ತಿತ್ತು. 

ದಾಳಿಕೋರರ ಪತ್ತೆಗಾಗಿ ವಿಶೇಷ ತನಿಖಾ ತಂಡ ಮತ್ತು ಪೊಲೀಸರ ತಂಡಗಳು ವ್ಯಾಪಕ ಶೋಧ ನಡೆಸುತ್ತಿವೆ. 

Advertisement

Udayavani is now on Telegram. Click here to join our channel and stay updated with the latest news.

Next