Advertisement

Hubli; ಬಾಂಬ್ ಬೆದರಿಕೆ ಹಾಕಿದವರ ಮೇಲೆ ಗುಂಡು ಹಾರಿಸಿ: ಸೈಯದ್ ತಾಜಾವುದ್ದೀನ್ ಖಾದ್ರಿ

05:59 PM Dec 02, 2023 | Team Udayavani |

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದವರ ಮೇಲೆ ಗುಂಡು ಹಾರಿಸಿ ಎಂದು ಇಸ್ಲಾಂ ಧರ್ಮಗುರು ಸೈಯದ್ ತಾಜಾವುದ್ದೀನ್ ಖಾದ್ರಿ ಆಗ್ರಹಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಹುಬ್ಬಳ್ಳಿ ತಾಲೂಕಿನ ಪಾಳಾ ದರ್ಗಾ ಹಜರತ್ ಬಾದಶಾ ಪೀರನ್ ಇಸ್ಲಾಂ ಧರ್ಮಗುರು ಸೈಯ್ಯದ್ ತಾಜಾವುದ್ದೀನ್, ಇಸ್ಲಾಂ ಧರ್ಮದಲ್ಲಿ ಯಾರೂ ಮತಾಂತರ ಮಾಡು ಎಂದು ಹೇಳಲ್ಲ. ಬಾಂಬ್ ಹಾಕುತ್ತೇವೆಂದು ಬೆದರಿಕೆ ಹಾಕುವುದು ಸರಿಯಲ್ಲ. ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ ಎಂದರು.

ಮಹಮ್ಮದ್ ಪೈಗಂಬರ್ ಯಾವತ್ತೂ ಬಲವಂತದ ಮತಾಂತರ ಮಾಡಿ ಎಂದು ಹೇಳಿಲ್ಲ. ಇಸ್ಲಾಂ ಅಂದರೆ ಶಾಂತಿ. ಹೆದರಿ ಯಾರೂ ಮತಾಂತರ ಆಗಬಾರದು ಎಂದು ಪೈಗಂಬರ್ ಹೇಳಿದ್ದಾರೆ. ಧಮ್ಕಿ ಹಾಕಿ ಮತಾಂತರ ಮಾಡುವುದು ಖಂಡನೀಯ. ಕೆಟ್ಟ ಕೆಲಸ ಮಾಡುವವರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next