Advertisement

ಶೋಭಾ ಕೇಮ್‌ ಬ್ಯಾಕ್‌: ಉಳಿದಿವೆ ಹತ್ತಾರು ಸಮಸ್ಯೆ

02:35 AM May 24, 2019 | Team Udayavani |

ಉಡುಪಿ: ಕೆಲವು ಮಂದಿ ಸ್ವಪಕ್ಷೀಯರಿಂದಲೇ ಸಾಮಾಜಿಕ ಜಾಲತಾಣದಲ್ಲಿ “ಗೋ ಬ್ಯಾಕ್‌’ ಪ್ರತಿರೋಧ ಎದುರಿಸಿದ ಶೋಭಾ ಕರಂದ್ಲಾಜೆ ಇದನ್ನು ಮೀರಿ ಭರ್ಜರಿ ಜಯ ಸಾಧಿಸಿದ್ದಾರೆ. ಶೋಭಾ ಗೋ ಬ್ಯಾಕ್‌ ಚಳವಳಿ ಆರಂಭವಾದ ಹೊತ್ತಿಗೆ ಅದಕ್ಕೆ ಇತರ ಕೆಲವರು ಧ್ವನಿ ಸೇರಿಸಿ “ಶೋಭಾ ಕ್ಷೇತ್ರದ ಕಡೆ ಹೆಚ್ಚು ಓಡಾಟ ಮಾಡಿಲ್ಲ’ ಎಂದು ಆರೋಪಿಸಿದ್ದರು. ಇದಕ್ಕೆ ಶೋಭಾ ಸಮರ್ಥವಾಗಿ ಉತ್ತರ ನೀಡಿದ್ದರಾದರೂ ಕೆಲವೊಂದು ಸಮಸ್ಯೆಗಳು ಈಗಲೂ ಹಾಗೆಯೇ ಉಳಿದುಕೊಂಡಿವೆ. ಶೋಭಾ ಮತ್ತೆ ಗೆದ್ದು ಬಂದಿದ್ದಾರೆ. ಈ ಬಾರಿ ನಮ್ಮ ಬೇಡಿಕೆಗಳು ಈಡೇರಬಹುದು ಎಂಬ ನಿರೀಕ್ಷೆ ಕ್ಷೇತ್ರದ ಜನರಲ್ಲಿ ಸಹಜವಾಗಿಯೇ ಬಲಗೊಂಡಿವೆ.

Advertisement

ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿ 66ರ ಅಪೂರ್ಣ, ಅವೈಜ್ಞಾನಿಕ ಕಾಮಗಾರಿಯ ಸಮಸ್ಯೆ ಉಳಿದುಕೊಂಡಿದೆ. ಇದೇ ರೀತಿ ತುರ್ತಾಗಿ ಪರಿಹರಿಸಬೇಕಾದ ಇನ್ನೊಂದು ಸಮಸ್ಯೆ ಮರಳಿನದ್ದು. ಮರಳುಗಾರಿಕೆಗೆ ಹಸಿರುನಿಶಾನೆ ದೊರೆಯದೆ ಜಿಲ್ಲೆಯ ಆರ್ಥಿಕ ಚಟುವಟಿಕೆ ಮಂಕಾಗಿದೆ. ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಜಿಲ್ಲೆಯಾದ್ಯಂತ ತಲೆದೋರಿದ್ದು ಶಾಶ್ವತ ಪರಿಹಾರ ಯೋಜನೆ, ಅಂತರ್ಜಲ ವೃದ್ಧಿಗೆ ಅಗತ್ಯ ಕ್ರಮ ಅನುಷ್ಠಾನಗೊಳ್ಳಬೇಕಿದೆ. ಹಕ್ಕುಪತ್ರ, ಡೀಮ್ಡ್ ಫಾರೆಸ್ಟ್‌ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಬೇಕಿದೆ. ಮೀನುಗಾರರಿಗೆ ಡೀಸೆಲ್‌ ಸಬ್ಸಿಡಿ, ಸುವರ್ಣ ತ್ರಿಭುಜ ಬೋಟ್‌ನ ಅವಶೇಷ ಮೇಲೆತ್ತುವುದು, ಬಂದರುಗಳ ಅಭಿವೃದ್ಧಿ, ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ಮೊದಲಾದ ಬೇಡಿಕೆಗಳು ಹಾಗೆಯೇ ಉಳಿದಿವೆ.

ಚಿಕ್ಕಮಗಳೂರು ಭಾಗದಲ್ಲಿ ಕಾಫಿ ಬೆಳೆಗಾರರು ಮತ್ತು ಅಡಿಕೆ ಬೆಳೆಗಾರರ ಸಮಸ್ಯೆಗಳು, ಕಸ್ತೂರಿ ರಂಗನ್‌ ವರದಿ ಆತಂಕ, ಕಾಡುಪ್ರಾಣಿಗಳ ಹಾವಳಿ ಮೊದಲಾದವುಗಳಿಗೆ ಪರಿಹಾರ ಬೇಕಿದೆ. ಉಡುಪಿ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪನೆಯಾಗಬೇಕು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಗೊಳ್ಳಬೇಕು. ಕೃಷಿಕರಿಗೆ ಸವಲತ್ತುಗಳನ್ನು ಒದಗಿಸಬೇಕು ಇತ್ಯಾದಿ ಹಳೆಯ ಬೇಡಿಕೆಗಳು.

ಇದರ ಜತೆಗೆ ರೈಲ್ವೆ ಅಭಿವೃದ್ಧಿ, ರಸ್ತೆ ಸಂಪರ್ಕ ಅಭಿವೃದ್ಧಿ, ಐಟಿ ಕ್ಷೇತ್ರದ ಬೆಳವಣಿಗೆ, ಇತರ ಪರಿಸರ ಪೂರಕ ಕಾರ್ಖಾನೆಗಳ ಸ್ಥಾಪನೆ, ಗ್ರಾಮೀಣ ಮಹಿಳೆಯರ ಕೈಗೆ ಉದ್ಯೋಗ ಒದಗಿಸುವುದು ಮೊದಲಾದವುಗಳತ್ತ ಗಮನ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next