Advertisement

ವಡ ಪಾವ್, ಬೋಂಡಾ ಚಟ್ನಿ‌ ಸವಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

06:47 PM Dec 22, 2021 | Team Udayavani |

ಕಾಪು : ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಗೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ‌ ಕರಂದ್ಲಾಜೆ ಅವರು ಕಾಪು ಪೇಟೆಯಲ್ಲಿ ಗೂಡಂಗಡಿಗೆ ತೆರಳಿ ವಡಾ ಪಾವ್, ಬಜೆ ಚಟ್ನಿ ಪೋಡಿಯನ್ನು ಸವಿದರು.

Advertisement

ಬಿಜೆಪಿ ಕಛೇರಿಯ ಕೆಳಗೆ ಇರುವ ಗೂಡಂಗಡಿ ಮತ್ತು ವಡಾಪಾವ್ ಅಂಗಡಿಗೆ ತೆರಳಿದ ಅವರು ಕಾರ್ಯಕರ್ತರೊಂದಿಗೆ ಸೇರಿಕೊಂಡು ವಡಾ ಪಾವ್, ಬೋಂಡಾ, ಬಜೆ ಚಟ್ನಿ ಸೇವಿಸಿದರು.

ತಾವೇ ಸ್ವತಹ ತಮ್ಮ‌ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ವಿವಿಧ ತಿಂಡಿ ತಿನಿಸುಗಳನ್ನು ಸರ್ವ್ ಮಾಡಿದ್ದು, ವಿಶೇಷವೆಂದೆನಿಸಿದೆ‌.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಕುತ್ಯಾರು‌ ನವೀನ್‌ ಶೆಟ್ಟಿ, ಶಿಲ್ಪಾ‌ ಜಿ. ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಸುರೇಂದ್ರ ಪಣಿಯೂರು, ಗೀತಾಂಜಲಿ ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನ್‌ ಎಸ್. ಕೆ.‌, ಗೋಪಾಲ ಕೃಷ್ಣ ರಾವ್, ಶಿವ ಕುಮಾರ್ ಅಂಬಲಪಾಡಿ, ಸಂದೀಪ್ ಶೆಟ್ಟಿ, ಸಂತೋಷ್ ಸುವರ್ಣ, ಸತೀಶ್ ಪೂಜಾರಿ, ಕೇಸರಿ ಯುವರಾಜ್, ಮಾಲಿನಿ ಶೆಟ್ಟಿ, ಇಂದಿರಾ ಶೆಟ್ಟಿ, ಪ್ರವೀಣ್ ಕುಮಾರ್, ಬೀಡು ಬದಿ ವಾರ್ಡ್ ಅಭ್ಯರ್ಥಿ ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ರೆಫ್ರಿಜರೇಟರ್ ಗಳಲ್ಲಿ ನ್ಯಾನೋ ಸೋಂಕು ನಿವಾರಕ ತಂತ್ರಜ್ಞಾನ ಪರಿಚಯಿಸಿದ ಗೋದ್ರೆಜ್‍

Advertisement

Advertisement

Udayavani is now on Telegram. Click here to join our channel and stay updated with the latest news.

Next