Advertisement

ಇಂದ್ರಸೇನ ಶಿವರಾಜ್‌ಕುಮಾರ್‌

08:14 AM Jun 06, 2020 | Lakshmi GovindaRaj |

ನಟ ಶಿವರಾಜ್‌ ಕುಮಾರ್‌ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಆ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿ ಅಭಿಮಾನಿ ಗಳ ಮೆಚ್ಚುಗೆ ಪಡೆದಿದೆ. ಅಷ್ಟಕ್ಕೂ ಯಾವುದು ಆ ಸಿನಿಮಾ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಇಂದ್ರಸೇನ. ಹೌದು, ಶಿವಣ್ಣ ಇಂದ್ರಸೇನ ಎಂಬ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಮುರಳಿ ಮೋಹನ್‌ ಈ ಚಿತ್ರದ ನಿರ್ದೇಶಕರು.

Advertisement

ಇಂದ್ರಸೇನ ಚಿತ್ರದ ಮೂಲಕ ಮುರಳಿ ಮೋಹನ್‌ ಮತ್ತೆ ನಿರ್ದ ಶನಕ್ಕೆ  ಮರಳುತ್ತಿದ್ದಾರೆ. ಈ ಹಿಂದೆ ನಾಗರಹಾವು, ಸಂತ ಸೇರಿದಂತೆ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಮುರಳಿ, ಇತ್ತೀಚಿನ ವರ್ಷಗಳಲ್ಲಿ ನಿರ್ದೇಶನ ದಿಂದ ದೂರವೇ ಉಳಿದಿದ್ದರು. ಆದರೆ ಈಗ ಇಂದ್ರಸೇನ ಚಿತ್ರದ ಮೂಲಕ ಮತ್ತೆ  ಬರುತ್ತಿದ್ದಾರೆ. ಎಲ್ಲಾ ಓಕೆ, ಈ ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು. ಒಂದಷ್ಟು ನೈಜ ಅಂಶಗಳನ್ನಿಟ್ಟು ಕೊಂಡು ಅದಕ್ಕೆ ಸಿನಿ ರೂಪ ಕೊಡುತ್ತಿದ್ದಾರಂತೆ.

ಶತ್ರುಗಳು ಹೊರಗಿಲ್ಲ, ಒಳಗೆಯೇ ಇದ್ದಾರೆ. ಹೊರಗಿನ  ಶತ್ರುಗಳಿಗಿಂತ ನಮ್ಮ ಬೆನ್ನ ಹಿಂದೆ ಇರುವ ಶತ್ರುಗಳು ತುಂಬಾ ಅಪಾಯ ಕಾರಿ. ಈ ಹಿಂದೆ ನಾವು ಬ್ರಿಟಿಷರ ವಿರುದ ಹೋರಾಡಬೇಕಾಗಿತ್ತು. ಆ ನಂತರ ನಮ್ಮೊಳಗಿನ ಶತ್ರುಗಳ ಜೊತೆಯೇ ಹೋರಾಡು ವಂತಾ ಯಿತು. ಗಾಂಧೀಜಿ ತಂದು ಕೊಟ್ಟ ಭಾರತವನ್ನು ಉಳಿಸಲು ಯಾರು ಬರಬೇಕು ಎಂಬ ಹಿನ್ನೆಲೆ ಯೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಹಾಗಂತ ಚಿತ್ರದಲ್ಲಿ ಕಮರ್ಷಿಯಲ್‌ ಅಂಶಗಳಿಗೇನು ಕೊರತೆ ಯಿಲ್ಲ. ಅಭಿಮಾನಿಗಳು ಇಷ್ಟ ಪಡುವ ಎಲ್ಲಾ ಅಂಶಗಳು ಈ  ಚಿತ್ರದಲ್ಲಿವೆಯಂತೆ.

ಸದ್ಯ ಶಿವರಾಜ್‌ ಕುಮಾರ್‌ ಅವರ ಭಜರಂಗಿ 2 ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಈ ನಡುವೆಯೇ ಆರ್‌ ಡಿಎಕ್ಸ್‌ ಚಿತ್ರಕ್ಕೆ ಮುಹೂರ್ತ ನಡೆದಿದೆ. ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆ ಶಿವರಾಜ್‌  ಕುಮಾರ್‌ ಅವರ ಮತ್ತಷ್ಟು ಚಿತ್ರ ಗಳು ಚಿತ್ರೀಕರಣಕ್ಕೆ ಅಣಿಯಾಗಲಿದೆ. ಸದ್ಯ ಶಿವರಾಜ್‌ ಕುಮಾರ್‌ ಮನೆಯಲ್ಲಿ ವಕೌìಟ್‌, ವೆಬ್‌ ಸೀರಿಸ್‌ ಮೂಲಕ ಟೈಂಪಾಸ್‌ ಮಾಡುತ್ತಿ ದ್ದಾರೆ. ಜೊತೆಗೆ ಅವರನ್ನು ಹುಡುಕಿಕೊಂಡು ಹೊಸ ಕಥೆಗಳು ಕೂಡಾ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next