Advertisement

ಮೂತ್ರ ವಿಸರ್ಜನೆ ಘಟನೆ: ಬುಡಕಟ್ಟು ಕಾರ್ಮಿಕನ ಪಾದಪೂಜೆ ಮಾಡಿದ ಮಧ್ಯಪ್ರದೇಶ ಸಿಎಂ ಚೌಹಾಣ್

11:43 AM Jul 06, 2023 | Team Udayavani |

ಭೋಪಾಲ್: ಬುಡಕಟ್ಟು ಸಮುದಾಯದ ಕಾರ್ಮಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸಿದ ಘಟನೆ ಮಧ್ಯಪ್ರದೇಶದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಇದೀಗ ಆ ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕರೆದು ಪಾದಪೂಜೆ ಮಾಡಿದ್ದಾರೆ.

Advertisement

ಬುಡಕಟ್ಟು ಸಮಾಜದ ಕಾರ್ಮಿಕ ದಶ್ಮೇಶ್ ರಾವತ್ ಅವರನ್ನು ಇಂದು ಸಿಎಂ ಚೌಹಾಣ್ ತಮ್ಮ ನಿವಾಸಕ್ಕೆ ಕರೆಸಿದ್ದಾರೆ. ಬಳಿಕ ಆತನ ಪಾದಪೂಜೆ ಮಾಡಿ ಸನ್ಮಾನಿಸಿದ್ದಾರೆ. ‘ನಿಮ್ಮ ವಿಡಿಯೋ ನೋಡಿ ನನಗೆ ಬೇಸರವಾಯಿತು. ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ, ನಿಮ್ಮಂತಹ ಜನರು ನನಗೆ ದೇವರಂತೆ’ ಎಂದರು.

ಬಳಿಕ ದಶ್ಮೇಶ್ ರಾವತ್ ನನ್ನು ಪಕ್ಕದ ಸ್ಮಾರ್ಟ್ ಸಿಟಿ ಪಾರ್ಕ್ ಗೆ ಕರೆದುಕೊಂಡು ಹೋದ ಸಿಎಂ ಚೌಹಾಣ್, ಅಲ್ಲಿ ಗಿಡವೊಂದನ್ನು ನೆಟ್ಟರು.

ಸಿಧಿ ಜಿಲ್ಲೆಯಲ್ಲಿ ಪ್ರವೇಶ್ ಶುಕ್ಲಾ ಎಂಬಾತ ದಶ್ಮೇಶ್ ರಾವತ್ ಎಂಬ ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದ. ಇದು ವೈರಲ್ ಆಗಿತ್ತು. ಪ್ರವೇಶ ಶುಕ್ಲಾನನ್ನು ಮಂಗಳವಾರ ತಡರಾತ್ರಿ ಬಂಧಿಸಲಾಯಿತು.

Advertisement

ಘಟನೆಯ ನಂತರ ಮಧ್ಯಪ್ರದೇಶ ಸರ್ಕಾರವು ಬುಧವಾರ ಆರೋಪಿಯ ಒಡೆತನದ ಆಸ್ತಿಯ ಭಾಗಗಳನ್ನು ನೆಲಸಮಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next