Advertisement

ಬೆಳಗಾವಿಯಲ್ಲಿ ಪೊಲೀಸರ ಕಣ್ಣುತಪ್ಪಿಸಿ ಭಗವಧ್ವಜ ಹಾರಿಸಿದ ಶಿವಸೇನೆ ಮುಖಂಡರು!

07:40 AM Jan 22, 2021 | Team Udayavani |

ಬೆಳಗಾವಿ: ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ತೆರಿವಿಗೆ ಮುಂದಾಗಿದ್ದ ಮಹಾರಾಷ್ಟ್ರದ ಶಿವಸೇನೆ ಮುಖಂಡರು ಪೊಲೀಸರ ಕಣ್ಣು ತಪ್ಪಿಸಿ ಕದ್ದುಮುಚ್ಚಿ ಬೆಳಗಾವಿ ತಾಲೂಕಿನ ಕೋನೇವಾಡಿ ಗ್ರಾಮಕ್ಕೆ ಅಕ್ರಮವಾಗಿ ನುಗ್ಗಿ ಭಗವಧ್ವಜ ಹಾರಿಸಿದ್ದಾರೆ.

Advertisement

ಬೆಳಗಾವಿ ಸಮೀಪದ ಕೊಗನೊಳ್ಳಿ ಹಾಗೂ ಶಿನೋಳಿ ಚೆಕ್‌ಪೋಸ್ಟ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರಿಂದ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ವಾಪಸ್ಸು ಕಳುಹಿಸಿದ್ದರು. ಕರ್ನಾಟಕ ಪ್ರವೇಶಿಸದಂತೆ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಆದರೆ ಪೊಲೀಸರ ಕಣ್ಣು ತಪ್ಪಿಸಿ ಅನ್ಯ ಮಾರ್ಗದಿಂದ ಶಿವಸೇನೆ ಮುಖಂಡರು ತುರಮುರಿ ಸಮೀಪದ ಕೋನೇವಾಡಿ ಗ್ರಾಮದ ಶ್ರೀ ಬ್ರಹ್ಮಲಿಂಗ ತರುಣ ಯುವಕ ಮಂಡಳದ ನಾಮಫಲಕದ ಎದುರು ಭಗವಧ್ವಜ ಹಚ್ಚಿದ್ದಾರೆ.

ಕೊಲ್ಲಾಪುರ ಜಿಲ್ಲೆಯ ಶಿವಸೇನೆಯ ಮುಖಂಡರು ಬೆಳಗಾವಿ ಪ್ರವೇಶಿಸಲು ಎಷ್ಟೇ ಪ್ರಯತ್ನಿಸಿದರೂ ಶಿನ್ನೋಳಿಯಲ್ಲಿಯೇ ಎಲ್ಲರನ್ನೂ ಪೊಲೀಸರು ತಡೆ ಹಿಡಿದಿದ್ದರು. ಅರ್ಧ ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ಸಾಗಿದ್ದರು. ಆದರೆ ಗಡಹಿಂಗ್ಲಜ್‌ನ ಶಿವಸೇನೆ ಮುಖಂಡರಾದ ಸುನೀಲ್ ಶಿಂತ್ರೆ, ಸಂಗ್ರಾಮ ಕುಪೇಕರ, ಪ್ರಭಾಕರ ಖಾಂಡೇಕರ ಸೇರಿದಂತೆ ಅನೇಕರು ಸೇರಿ ಭಗವಧ್ವಜ ಹಚ್ಚಿ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next