Advertisement

ಸಚಿವ ಹೆಬ್ಬಾರ್ ಸತತ ಪ್ರಯತ್ನ: ತಾಟವಾಳ ಸೇತುವೆ ಮರು ನಿರ್ಮಾಣಕ್ಕೆ ಅನುದಾನ ಮಂಜೂರು

08:45 PM Jan 24, 2022 | Team Udayavani |

ಯಲ್ಲಾಪುರ : ಹಳಿಯಾಳ- ಯಲ್ಲಾಪುರ ತಾಲೂಕಿನ ಸಂಪರ್ಕ ಕೊಂಡಿಯಾಗಿದ್ದ ತಾಟವಾಳ ಸೇತುವೆ ಮರು ನಿರ್ಮಾಣಕ್ಕೆ ಸಚಿವ ಶಿವರಾಮ ಹೆಬ್ಬಾರ್ ಅವರ ಸತತ ಪ್ರಯತ್ನದಿಂದಾಗಿ ಅನುದಾನ ಮಂಜೂರಾಗಿದೆ.

Advertisement

ಹಳಿಯಾಳ ಮತ್ತು ಯಲ್ಲಾಪುರ ತಾಲೂಕು ಸೇರಿದಂತೆ ಸಮೀಪದ ಬೆಳಗಾವಿ ಜಿಲ್ಲೆಗೂ ಸಂಪರ್ಕ ಸೇತುವಾಗಿದ್ದ ತಾಟವಾಳ ಸೇತುವೆ ತೀರಾ ಕಿರಿದಾಗಿತ್ತು ವಾಹನಗಳ ಓಡಾಟಕ್ಕೆ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ಇಲ್ಲಿ ಸೇತುವೆ ಮರು ನಿರ್ಮಾಣವಾಗಬೇಕೆಂಬುದು ಈ ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ ಹೆಬ್ಬಾರ್ ಅವರು ಕೂಡ ಹಳಿಯಾಳ ಹಾಗೂ ಬೆಳಗಾವಿ ಭಾಗಕ್ಕೆ ಪ್ರಯಾಣಿಸುವ ಸಂದರ್ಭದಲ್ಲೂ ಸೇತುವೆ ಪರಿಶೀಲಿಸಿದ್ದರು. ಸ್ಥಳೀಯರು ಕೂಡ ಸೇತುವೆ ಮರು ನಿರ್ಮಾಣಕ್ಕೆ ಆಗ್ರಹಿಸಿದ್ದರು. ಹೀಗಾಗಿ ಸಚಿವ ಹೆಬ್ಬಾರ್ ಅವರು ನಬಾರ್ಡ್ ಪ್ರಸ್ತಾವ ಸಲ್ಲಿಸಿ, ಈ ಬಗ್ಗೆ ನಡೆಸಿದ ಸತತ ಪ್ರಯತ್ನದ ಫಲವಾಗಿ ಇದೀಗ 7.21 ಕೋಟಿ ಅನುದಾನ ಮಂಜೂರಾಗಿದೆ. ಈ ಪೈಕಿ ನಬಾರ್ಡ್ ದಿಂದ 576.80 ಲಕ್ಷ ಮಂಜೂರಾತಿ ದೊರಕಿದ್ದು, ಇನ್ನುಳಿದ 144.2 ಲಕ್ಷ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ರಾಜ್ಯ ಹೆದ್ದಾರಿ 93ರ ಖಾನಾಪುರ- ತಾಳಗುಪ್ಪಾದ ಮೇಲೆ ಶೀಘ್ರದಲ್ಲೇ ತಾಟವಾಳ ಹೊಸ ಸೇತುವೆ ನಿರ್ಮಾಣವಾಗಲಿದೆ.

ಇದನ್ನೂ ಓದಿ : ಉತ್ತರ ಕನ್ನಡ ನನ್ನ ಕರ್ಮ ಭೂಮಿ ಅದರ ಅಭಿವೃದ್ಧಿಗೆ ಸದಾ ಶ್ರಮಿಸುವೆ :ಸಚಿವ ‌ಶಿವರಾಮ ಹೆಬ್ಬಾರ್

Advertisement

Udayavani is now on Telegram. Click here to join our channel and stay updated with the latest news.

Next