Advertisement

ಐಟಿ ದಾಳಿ ಬಳಿಕ ಶಿವರಾಜ್‌ಕುಮಾರ್‌, ಪುನೀತ್‌ ಮೊದಲ ಪ್ರತಿಕ್ರಿಯೆ 

05:16 AM Jan 05, 2019 | Team Udayavani |

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 2 ದಿನಗಳ ಕಾಲ ನಿರಂತರ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌ ಮತ್ತು ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಶುಕ್ರವಾರ ರಾತ್ರಿ 11.30 ರ ವೇಳೆಗೆ ಐಟಿ ಅಧಿಕಾರಿಗಳು ಮನೆಯಿಂದ ತೆರಳಿದ ಬಳಿಕ ಮಾತನಾಡಿದ ಪುನೀತ್‌ ರಾಜ್‌ಕುಮಾರ್‌, ಐಟಿಗೆ ನಾವು ನಾಗರಿಕರಾಗಿ ಸಹಕರಿಸಿದ್ದೇವೆ. ನಾವು ಅವರಿಗೆ ತೊಂದರೆ ಕೊಟ್ಟಿಲ್ಲ, ಅವರೂ ನಮಗೆ ತೊಂದರೆ ಕೊಟ್ಟಿಲ್ಲ ಸಹಕರಿಸಿದ್ದೇವೆ ಅಷ್ಟೇ ಎಂದರು.

ಅಕೌಂಟ್‌ ವಿಚಾರದಲ್ಲಿ ವ್ಯತ್ಯಾಸ ಕಂಡು ಬಂದರೆ ದಾಳಿ ಮಾಡುತ್ತಾರೆ. 1984 ರಲ್ಲಿ ಚೆನ್ನೈನಲ್ಲಿ ಇರುವಾಗಲೂ ದಾಳಿ ನಡೆದಿತ್ತು ಎಂದರು. 

ಸ್ವಲ್ಪ ನೋವಾಗಿದೆ
ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್‌ 
ನನ್ನ ಮನೆಯ ಮೇಲೆ ಮೊದಲ ಬಾರಿ ದಾಳಿ ಆಗಿದೆ, ಕಾರಣ ಗೊತ್ತಿಲ್ಲ .ಆದಾಯ ತೆರಿಗೆ ಪಾವತಿಯ ಎಲ್ಲಾ ದಾಖಲೆಗಳು ಸರಿಯಾಗಿವೆ  ಎಂದರು. 

ಚೆನ್ನೈನಲ್ಲಿ ಇರುವಾರ 1984 ಮತ್ತು 85 ರಲ್ಲೂ ದಾಳಿ ನಡೆದಿತ್ತು. ಮೊನ್ನೆ ದಾಳಿ ಆದಾಗ ಸ್ವಲ್ಪ ಬೇಸರ ಆಗಿತ್ತು. ಸ್ವಲ್ಪ ಕಿರಿಕಿರಿಯಾದರೂ ದಾಖಲೆಗಳನ್ನು ನೀಡಬೇಕಿತ್ತು ಎಂದರು. 

Advertisement

ಐಟಿ ಇಲಾಖೆಯವರು ಅವರ ಕೆಲಸ ಮಾಡಿದ್ದಾರೆ. ಇಂದು ಚನ್ನಪಟ್ಟಣದಲ್ಲಿ ದ್ರೋಣ ಚಿತ್ರೀಕರಣವಿತ್ತು, ಅದನ್ನು ರದ್ದು ಮಾಡಿದ್ದೇವೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next