Advertisement

ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವರಾಜ ತಂಗಡಗಿ ನಾಮಪತ್ರ ಸಲ್ಲಿಕೆ

03:53 PM Apr 17, 2023 | Team Udayavani |

ಕನಕಗಿರಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಚುನಾವಣಾಧಿಕಾರಿ ಸಮೀರ್ ಮುಲ್ಲಾ ಅವರಿಗೆ ಸೋಮವಾರ (ಎ.17) ನಾಮ ಪತ್ರ ಸಲ್ಲಿಸಿದರು.

Advertisement

ಅವರು ಇಲ್ಲಿನ ಕೆಪಿಎಸ್ ಪ್ರೌಡ ಶಾಲೆಯಲ್ಲಿರುವ ಚುನಾವಣಾ ಕಚೇರಿ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.

ಬೆಳಗ್ಗೆ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಮುಂಬಾಗದಿಂದ ರಾಜಬೀದಿ ಮುಖಾಂತರವಾಗಿ ಶ್ರೀಕನಕಾಚಲ ಪತಿ ದೇವಸ್ಥಾನ ಮಾರ್ಗವಾಗಿ ಸಹಸ್ರಾರು ಕಾರ್ಯಕರ್ತರೊಂದಿಗೆ ಇಲ್ಲಿನ ಚುನಾವಣಾ ಕಚೇರಿಗೆ ಆಗಮಿಸಿದರು.

ಬಳಿಕ ಮಾತನಾಡಿದ‌ ಅವರು, ಬಿಜೆಪಿ ಪಕ್ಷ ಸುಳ್ಳಿನ ಕಂತೆಯಾಗಿದೆ.  ನಿಮ್ಮ ಮನೆ ಮಗ ಶಿವರಾಜ ತಂಗಡಗಿ ಕ್ಷೇತ್ರದಲ್ಲಿ ಜನಪರ ಕಾರ್ಯಗಳನ್ನು ಮಾಡಿದ್ದೇನೆ. ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ನನಗೆ ಶಕ್ತಿ ನೀಡಿ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.

ವೇಳೆಯಲ್ಲಿ ಮಾಜಿ ಸಂಸದ ಶಿವರಾಮೇಗೌಡ, ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ಸ್ವಾಮಿ ಕಲುಬಾಗಿಲಮಠ, ಕಾರಟಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶರಣೇಗೌಡ ಪಾಟೀಲ್, ಮಾಜಿ ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿ ವಕೀಲ್, ಮಾಜಿ ಜಿಪ ಸದಸ್ಯರಾದ ವೀರೇಶ ಸಮಗಂಡಿ, ಅಮರೇಶ ಗೋನಾಳ, ಮಾಜಿ ತಾಪ ಅಧ್ಯಕ್ಷರಾದ ಬಸವಂತಗೌಡ, ಮಹ್ಮದ್ ರಫಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ  ದೊಡ್ಡಪ್ಪ ದೇಸಾಯಿ, ಕನಕಗಿರಿ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಪಪ ಸದಸ್ಯರಾದ ಸಂಗಪ್ಪ ಸಜ್ಜನ, ಅನಿಲ್ ಬಿಜ್ಜಳ, ಶರಣೇಗೌಡ ಪಾಟೀಲ್, ರಾಕೇಶ ಕಂಪ್ಲಿ, ಸಿದ್ದೇಶ ಕಲುಬಾಗಿಲಮಠ, ರಾಜಾಸಾಬ ನಂದಾಪುರ, ಪ್ರಮುಖರಾದ ನಿವೃತ್ತ ಪೋಲಿಸ್ ಅಧಿಕಾರಿ ಜನಗಂಡೆಪ್ಪ ಪೂಜಾರ, ಪ್ರಮುಖರಾದ ಹನುಮೇಶ ನಾಯಕ, ಶರಣಪ್ಪ ಭತ್ತದ, ಹೊನ್ನುರಸಾಬ ಮೇಸ್ತ್ರಿ, ಸೇರಿದಂತೆ ಇತರರು ಇದ್ದರು.

Advertisement

ಡಿಒಎಸ್ ಪಿ ಶೇಖರಯ್ಯ, ಸಿಪಿಐ ಜಗದೀಶ ನೇತೃತ್ವದ ತಂಡ ಭದ್ರತೆ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next