Advertisement

Politics; ಕೇವಲ 4 ಶಾಸಕರನ್ನು ಕರೆದುಕೊಂಡು ಹೋಗಲಿ ನೋಡುವ..: ಸಂತೋಷ್ ಗೆ ತಂಗಡಗಿ ಸವಾಲು

12:51 PM Sep 04, 2023 | Team Udayavani |

ಮೈಸೂರು: ಕಾಂಗ್ರೆಸ್ ಪಕ್ಷದ 40 ಶಾಸಕರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದ ಬಿ. ಎಲ್ ಸಂತೋಷ್ ಗೆ ಸಚಿವ ಶಿವರಾಜ ತಂಗಡಿ ತಿರುಗೇಟು ನೀಡುದ್ದು, ‘ನಲವತ್ತಲ್ಲ ಕೇವಲ ನಾಲ್ಕು ಶಾಸಕರನ್ನು ಕರೆದುಕೊಂಡು ಹೋಗಲಿ’ ಎಂದು ಸವಾಲೆಸೆದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಳುಗುವ ದೋಣಿ, ಅಲ್ಲಿಗೆ ಯಾರು ಹತ್ತುತ್ತಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.  ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ದೊಡ್ಡ ಸುಳ್ಳು. ಬಿಜೆಪಿ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದರು.

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ದವೂ ವಾಗ್ದಾಳಿ ನಡೆಸಿದ ತಂಗಡಗಿ, ಚುನಾವಣಾ ವೇಳೆ ಗಲ್ಲಿ ಗಲ್ಲಿ ಸುತ್ತಿದರೂ ಬಂದಿದ್ದು 66 ಸ್ಥಾನ. ಚುನಾವಣಾ ಚಾಣಕ್ಯನ ಆಟ ಏನು ನಡೆದಿಲ್ಲ. ಈಗ ನಮ್ಮ ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ನಮ್ಮಿಂದ ಯಾರು ಹೊರಗೆ ಹೋಗುವುದಿಲ್ಲ ಎಂದರು.

ಇದನ್ನೂ ಓದಿ:Video Viral:  ಹಿಂದೂ ಯುವಕ ಮತಾಂತರಗೊಂಡು ಮುಸ್ಲಿಮ್‌ ಯುವತಿ ಜತೆ ವಿವಾಹ

ಸರ್ಕಾರದ ಸಚಿವರು ಮತ್ತು ಶಾಸಕರ ನಡುವೆ ಸಮನ್ವಯತೆ ಕೊರತೆ ಇಲ್ಲ. ಎಲ್ಲರೂ ಪ್ರೀತಿ – ಸ್ನೇಹ ವಿಶ್ವಾಸದಿಂದ ಇದ್ದೇವೆ ಎಂದು ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದರು.

Advertisement

ಕೊಪ್ಪಳದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೊಂದಲ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಸಂಬಂಧ ಸಚಿವ ಎಚ್ ಸಿ ಮಹದೇವಪ್ಪಗೆ ಪತ್ರ ಬರೆದಿರುವುದು ಸತ್ಯ. ಪತ್ರ ಬರೆದ ತಕ್ಷಣ ಸಮನ್ವಯತೆ ಕೊರತೆ ಅಲ್ಲ. ಅಧಿಕಾರಿ ವಿರುದ್ದ ಹಲವು ಆರೋಪವಿದೆ. ಇಂತಹ ಅಧಿಕಾರಿ ನಮ್ಮ ಜಿಲ್ಲೆಗೆ ಬೇಡ ಎಂದು ಪತ್ರ ಬರೆದಿದ್ದೇನೆ. ಮಹದೇವಪ್ಪ ನನ್ನ ಸೀನಿಯರ್ ಇದ್ದಾರೆ. ಅವರಿಗೂ ಎಲ್ಲಾ ಗೊತ್ತಿದೆ ಪತ್ರಕ್ಕೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next