Advertisement

ಪ್ರವಾಹದಿಂದ ಉತ್ತರ ಕರ್ನಾಟಕ ಜನ ನರಳುತ್ತಿದ್ದರೆ ಸರಕಾರಕ್ಕೆ ಚಿಂತೆಯೇ ಇಲ್ಲ : ತಂಗಡಗಿ

05:05 PM Oct 19, 2020 | sudhir |

ಕೊಪ್ಪಳ :ಭಾರೀ ಮಳೆಯಿಂದ ಉತ್ತರ ಕರ್ನಾಟಕ ಜನ ಪ್ರವಾಹದಿಂದ ನರಳುತ್ತಿದ್ದರೆ, ಸರಕಾರ ಇದು ಯಾವುದೂ ನಮಗೆ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಉತ್ತರ ಕರ್ನಾಟಕ ಜನ ಪ್ರವಾಹದಿಂದ ನರಳುತ್ತಿದ್ದಾರೆ‌. ಇದುವರೆಗೂ ಯಾವೊಬ್ಬ ಶಾಸಕ, ಸಚಿವ ಹೋಗಿ ಭೇಟಿ ನೀಡಿಲ್ಲ. ಎಲ್ಲರೂ ಸತ್ತ ಮೇಲೆ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ಮಾಡ್ತಾರಾ ಎಂದು ತಂಗಡಗಿ ಪ್ರಶ್ನೆ ಮಾಡಿದರು. ಬಿಜೆಪಿಯವರಿಗೆ ಕಮಿಟ್ ಮೆಂಟ್ ಇಲ್ಲ, ಬರೀ ಮಾತಾಡ್ತಾರೆ.

ಇಲ್ಲಿವರೆಗೂ ಯಾವೊಬ್ಬ ಜನ ಪ್ರತಿನಿಧಿ ಪ್ರವಾಹ ಪ್ರದೇಶಕ್ಕೆ ಭೇಟಿ ನೀಡಿಲ್ಲ. ನಮ್ಮಲ್ಲಿನ ಜನರ ನೋವು ಹೇಳ ತೀರದಾಗಿದೆ.
ಇದನ್ನ ನೋಡಿದ್ರೆ ಸರ್ಕಾರ ಇದೆಯೋ ಎಲ್ಲವೋ ಅನ್ನೋ ಅನುಮಾನ ಮೂಡಿದೆ. ಕಂದಾಯ ಸಚಿವರು ಬೆಂಗಳೂರಿಗೆ ಮಾತ್ರ ಸಚಿವರು. ಕೇವಲ ಅವರು ನಾಮ್ ಕಾವಾಸ್ತೆ ಕಂದಾಯ ಸಚಿವರು. ಇವರಿಗೆ ಚುನಾವಣೆ ಇಂಪಾರ್ಟೆಂಟ್ ಆಗಿದೆ. ಜನ ಸತ್ತು ಹೋದ್ರೂ ಇವರಿಗೆ ಮುಖ್ಯ ಅಲ್ಲ, ಎಲ್ಲರೂ ಕಣ್ಮುಚ್ಚಿ ಕುಳತಿದ್ದಾರೆ ಎಂದು ಸರ್ಕಾರದ ವಿರುದ್ದ ಗುಡುಗಿದರು.

ಇದನ್ನೂ ಓದಿ:ಮುರಳೀಧರನ್ ಬಯೋಪಿಕ್ ಗೆ ಯಾಕಿಷ್ಟು ತೊಂದರೆ? ನಿಂತುಹೋಗುತ್ತಾ ವಿಜಯ್ ಸೇತುಪತಿ ಚಿತ್ರ

Advertisement

Udayavani is now on Telegram. Click here to join our channel and stay updated with the latest news.

Next