Advertisement

ಶಿವರಾಜ್‌ ಕುಮಾರ್‌ ಶಬರಿಮಲೆ ಯಾತ್ರೆ ರದ್ದು

10:06 AM Mar 18, 2020 | Lakshmi GovindaRaj |

ನಟ ಶಿವರಾಜ ಕುಮಾರ್‌ ಪ್ರತಿ ವರ್ಷ ಶಬರಿ ಮಲೆಗೆ ಮಾಲೆ ಹಾಕುತ್ತಾರೆ. ತಮ್ಮ ಸ್ನೇಹಿತರ ಜೊತೆ ಶಬರಿಮಲೆ ದರ್ಶನ ಮಾಡುತ್ತಾರೆ. ಅದರಂತೆ ಈ ವರ್ಷ ಕೂಡಾ ಶಿವರಾಜಕುಮಾರ್‌ ಶಬರಿ ಮಲೆಗೆ ಮಾಲೆ ಹಾಕಿದ್ದರು. ಶಬರಿಮಲೆಗೆ ಹೋಗಲು ತಯಾರಿ ಕೂಡಾ ನಡೆಸಿದ್ದರು.

Advertisement

ಆದರೆ, ಜಗತ್ತನ್ನು ಆವರಿಸಿರುವ ಕೊರೋನಾ ಎಫೆಕ್ಟ್ ನಿಂದಾಗಿ ಶಿವಣ್ಣ ಈ ವರ್ಷ ಶಬರಿಮಲೆಗೆ ಹೋಗಿಲ್ಲ. ಬದಲಾಗಿ ಇಲ್ಲಿಂದಲೇ ಅಯ್ಯಪ್ಪ ಸ್ವಾಮಿಗೆ ನಮಸ್ಕರಿಸಿ ಮಾಲೆ ತೆಗೆದಿದ್ದಾರೆ. ಭಾನುವಾರ ಜಾಲಹಳ್ಳಿ ಬಳಿಯ ಅಯ್ಯಪ್ಪ ದೇವಸ್ಥಾನದಲ್ಲಿ ಶಿವರಾಜಕುಮಾರ್‌ ಮಾಲೆ ತೆಗೆದಿದ್ದಾರೆ. ಇವರ ಜೊತೆ ರಘುರಾಮ್‌ ಸೇರಿದಂತೆ ಸ್ನೇಹಿತರು ಜೊತೆಯಾದರು.

ಸದ್ಯ ಶಿವರಾಜಕುಮಾರ್‌ ಅವರ “ದ್ರೋಣ’ ಚಿತ್ರ ಬಿಡುಗಡೆಯಾಗಿದೆ. ಆದರೆ, ಸದ್ಯಕ್ಕೆ ಕೊರೋನಾ ಎಫೆಕ್ಟ್ನಿಂದ ಪ್ರದರ್ಶನ ಸ್ಥಗಿತಗೊಂಡಿದೆ. ಇನ್ನು, “ಭಜರಂಗಿ-2′ ಚಿತ್ರದ ಚಿತ್ರೀಕರಣ ಕೂಡಾ ನಿಂತು ಹೋಗಿದೆ. ಈ ನಡುವೆಯೇ ಹೊಸ ಸಿನಿಮಾದ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next